Saturday, December 4, 2010

ನೊಂದಿರುವ ಜೀವಕ್ಕೆ, ಸಾಧನೆಯ ಪ್ರೇರಣೆಗೆ....

ಮುನ್ನುಡಿ: ಇತ್ತೇಚೆಗೆ ನನ್ನ ಒಬ್ಬ ಸ್ನೇಹಿತ ದುಃಖದಲ್ಲಿ ಇದ್ದಾಗ ನನ್ನ ಹತ್ತಿರ ಬಂದು....ಏನಾದರು ಬರಿದು ನನ್ನನ್ನು ಪ್ರೇರೇಪಿಸು..... ಅಂತ ಹೇಳಿದಾಗ......ಮೂಡಿದ ಕವಿತೆ ಇದು.


ಅದೇಕೋ ಈ ಕವಿತೆ ಬರೆಯುವಾಗ ಹಾಗು ಬರೆದ ಮೇಲೆ, ನನಗೆ 'ನಾನು' ಈ ಕವಿತೆ ಬರೀಲಿಲ್ಲ....ಯಾರೋ ನನ್ನಿಂದ ಇದನ್ನು ಬರಿಸುತ್ತಿದ್ದಾರೆ....ಪ್ರಾಯಶಃ...ಅವರೇ ಆ ನನ್ನ ಸ್ನೇಹಿತನ ಹತ್ತಿರ ಹೇಳಿಸಿ ಇದನ್ನು ನನ್ನಿಂದ ಬರಿಸುತ್ತಿದ್ದಾರೆ ಅನ್ನುವ ಭಾವನೆ ಬಹಳ ಸ್ಪಷ್ಟವಾಗಿ ಭಾಸ ವಾಗುತ್ತಿದೆ.

ಹಾಗಾಗಿ ಇದನ್ನು ನಾನು 'ನನ್ನ ಕವಿತೆ' ಅಂತ ಹೇಳುವ ಧೈರ್ಯ ಮಾಡುವುದಿಲ್ಲ.

ಇದನ್ನು ಓದಿದ ಆ ನನ್ನ ಸ್ನೇಹಿತ...ಇದಕ್ಕೆ ಹೀಗೇ ಶೀರ್ಷಿಕೆ ಇಡು.... ಅಂತ ಹೇಳಿದ್ದರಿಂದ....ಅವನ ಇಚ್ಚ್ಚೆಯ ಮೇರೆಗೆ ಈ ಶೀರ್ಷಿಕೆ ಇಡುತ್ತಿದ್ದೇನೆ......




ಹರಿ-ಹರಿದು ಬರಲಿನ್ನು ಕಷ್ಟಗಳು ನನಗ

ಸುರಿ-ಸುರಿದು ಬರಲಿನ್ನು ದು:ಖಗಳು ನನಗ......

ಪ್ರಳಯದಲ್ಲಿ ಹಾರಿ ಇಂದೆನ್ನ ಜಳಕ

ಪುಟಿ-ಪುಟಿದು ಹಾರುವೆ, ನಾ ನಾಳೆ ನಭಕ......



ಉರಿ-ಉರಿದು ಬಾ ಬೆಂಕಿ ನೀ ನನ್ನ ಬಳಿಗ

ಸುಡು-ಸುಡು ನೀ ಎಷ್ತಾರೆ, ನಾ ಕರಗಲ್ಲ ಇವಕ......

ಒಳಗಿರುವ ಶಕ್ತಿ ಅದು ಬೆಳಗಿರುವ ತನಕ

ಜಿಗಿ- ಜಿಗಿದು ಬರುವೆ ನಾ, ಅದು ಇರುವ ತನಕ......



ನಗು-ನಗು ನೀ ನಿಶೆ ಇಂದು, ರಾತ್ರಿ ಇದು ನಿನಗ

ಗರ್ಭದಲಿ ಇರೋ ಸೂರ್ಯ ಹೊರಬರುವ ತನಕ......

ಬೆಂಕಿಯ ಚಂಡೊOದು ಬೆಳೆಯುತಿದೆ ಒಳಗ

ಹೊರಬಂದು ಜಗವನ್ನು ಬೆಳಗುವ ತವಕ......

Sunday, October 24, 2010

We Have All Met

The Line really influenced me a lot.The line provoked in me a thought that all of us who have met in this life have also met in our previous lives.It prompts me to think in a different way we try to approach our relationships.

The relatives whom we have not spoken to.The friends whom we have not contacted for a long time.The people whom we once loved, but have long forgotten.This was not a relationship we have experienced in only this life.But in the previous life and also in the next life.We need to be more careful and more patient in our approach to all people who are connected to us.

I feel a sense of respect and more attachment to all those to whom I have ever been attached to and all those who have ever loved me and helped me. Because these are the people who know me from ages. Not 'Me' the Physical self but the vital force that is me.

'Try to Look at the Soul.....'

Live by the Truth

It is 6:30 in the morning, and I just read a line from 'The Mother' which says that the person who says 'I dont want anything' and the person who says 'I want this thing' have the same attitude. Because both are equally attached to their 'Desire' and 'Renunciation'.

A thought came to me from a verse in the Gita that, we should not expect anything and just do the Karma. How True! I could not help but relate the two ideas which in a way suggest the same thing.

Two different people from two different Eras speaking the same truth in different words and in different contexts. How did they know or even experience this truth?Did they both have access to the same Supreme Force? I really do not know!!!

I am only reading it today.I someday hope to realise and possibly live by that thought or the Truth.I hope one day the world will be a place where one can actually 'Live' by the 'Truth'

Wednesday, September 29, 2010

ಮಾತಾಡು ಮಗುವೆ ಏನಾಗಿದೆ ನಿನಗೆ

ಮುನ್ನುಡಿ: ಅದೇಕೋ...ಇತ್ತೀಚಿಗೆ ಕನ್ನಡಿಗರು ತಮ್ಮ ಮಕ್ಕಳೊಂದಿಗೆ ಕೂಡ ಇಂಗ್ಲಿಷ್ ನಲ್ಲಿ ಮಾತಾಡುವ ಒಂದು ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಇದು ಹೀಗೇ ಮುಂದುವರಿದರೆ,ಪ್ರಾಯಶಃ ನಾವೇ ಕನ್ನಡದ ಅಳಿವಿಗೆ ಕಾರಣವಾಗುತ್ತೀವಿ. ಇದು ನಾವು ತಾಯಿಗೆ ಮಾಡುವ ಒಂದು ಅಪರಾಧವೆಂದೇ ಪರಿಗಣಿಸಲ್ಪಡುತ್ತದೆ.

ಈ ಪಾಪಕ್ಕೆ ನಮ್ಮ ಮಕ್ಕಳು ಕೂಡ ನಮ್ಮನ್ನು ಕ್ಷಮಿಸುವುದಿಲ್ಲ. ಮುಂದಿನ ಪೀಳಿಗೆಗೆ ಕನ್ನಡತನವನ್ನು ಪಸರಿಸಿ ಹೋಗುವ ಕಾರ್ಯ ನಾವೇ ಮಾಡಬೇಕಿದೆ......

ಈ ಕನ್ನಡ ರಾಜ್ಯೋತ್ಸವಕ್ಕೆ, ಏನಾದರು ಬರೆಯಬೇಕು ಅಂತ ಅಂದುಕೊಂಡಾಗ, ಈ ವಿಷವವೇ ಸೂಕ್ತ ಅಂತ ಅನಿಸಿತು.....





ಮಾತಾಡು ಮಗುವೆ ಏನಾಗಿದೆ ನಿನಗೆ

ಕನ್ನಡ ಋಣವು ಕಾಡಿಲ್ಲವೆ ನಿನಗೆ......



ತುತ್ತು ತುತ್ತಲಿ ಕನ್ನಡ ಬೆರೆಸಿ

ಉಣಿಸುವ ತಾಯರು ಎಲ್ಲಿಹರಿಂದು....

ಮಾತು ಮಾತಲಿ ಕನ್ನಡತನ ಕಲಿಸುವ

ತಂದೆಯರು ಎಲ್ಲಿಹರು ಇಂದು.....



ಮನೆ ಮನೆಯಲ್ಲಿ ಒಂದು ಕನ್ನಡ ಶಾಲೆಯ

ಕಟ್ಟುವ ಗುರುಗಳು ಎಲ್ಲಿಹರಿಂದು....

ಮನ ಮನದಲಿ ಹೊಕ್ಕಿ ಕನ್ನಡತನ

ಕೆಣಕುವ ಗುರುಗಳು ಎಲ್ಲಿಗೆ ಹೊಗಿಹರಿಂದು.....



ಮಾತಾಡು ಮಗುವೆ ಏನಾಗಿದೆ ನಿನಗೆ

ಕನ್ನಡ ಕೋಟಿ ಆಣೆಯು ನಿನಗೆ.....



ಕಣ್ಣಲಿ ಕನ್ನಡ ಕಿಚ್ಚೇ ಇಲ್ಲದ

ಮಕ್ಕಳು ಯಾಕೆ ಬಂದಿಹರಿಲ್ಲಿ

ಕನ್ನಡವೇ ಹರಿಯದ ದೇಹಗಳಲಿ

ಪ್ರಾಣವು ಇರುವುದು ಇನ್ನೆಲ್ಲಿ....



ಮತ್ತೆ ಹುಟ್ಟಲೀ ವೀರ ಮಕ್ಕಳು

ಎದ್ದು ನಿಲ್ಲಲೀ ನಮ್ಮ ಒಕ್ಕಲು...

ಕಾಳಿಂಗನ ತವರಿದು ಮರೆಯಲೇ ಬೇಡ

ಹುಳುಗಳ ಹಾಗೇ ನಡೆಯಲೇ ಬೇಡ.....



ಮಾತಾಡು ಮಗುವೆ ಏನಾಗಿದೆ ನಿನಗೆ

ತಾಯಿಯ ಅಳಲು ಕೇಳದೆ ನಿನಗೆ......





ದಾಸರು ಹಾಡಿರೋ ರಚನೆಗಳಲ್ಲಿ

ಶರಣರು ಬರೆದಿರೋ ವಚನಗಳಲ್ಲಿ...

ಕನ್ನಡ ಕುಣಿಯುವ ದೇಹಗಳಲ್ಲಿ

ಕನ್ನಡತನ ಮಿಡಿಯುವ ಒಡಲುಗಳಲ್ಲಿ.....

ಬೆಳೆಯಲಿ ಮಕ್ಕಳು ಇವುಗಳ ಹೀರಿ

ಉಳಿಯಲಿ ತಾಯಿ ಎಲ್ಲರ ಮೀರಿ.....



ನೀನಾಡುವ ಮಾತೇ....ಮಾತೆಗೆ ವಸ್ತ್ರ

ನಿನ್ನಲಿ ಮಿಡಿಯುವ ಕನ್ನಡತನ ಅಸ್ತ್ರ....

ವಿಶ್ವ ಕಿಚ್ಚನೇ. ... ..ಕೊಚ್ಚುವ ರಭಸ

ಕನ್ನಡವಂದೇ ..ಬೆಳೆಯುವ ದಿವಸ....

ತಾಯಿಯು ಅಂದೇ...ಬೆಳೆಯುವ ದಿವಸ...

ತಾಯಿಯು ಅಂದೇ..ಮೆರೆಯುವ ದಿವಸ....



ದ್ವೈತ ಅದ್ವೈತವು ಸೇರಿದ ನಾಡು

ಕೊಂಕಣ ತುಳುವರ ಕೊಡವರ ನಾಡು

ನಮ್ಮದು ಇದು ಕರುನಾಡು....

ನಮ್ಮೆಲ್ಲರದು ಇದು ಕರುನಾಡು.....



ಮಾತಾಡು ಮಗುವೆ ಏನಾಗಿದೆ ನಿನಗೆ

ಕನ್ನಡ ಬೆಳೆಸುವ ಕಾರ್ಯವು....ನನಗೆ ನಿನಗೆ.....

ಮುಂಜಾವು....

ಮುನ್ನುಡಿ: ನಮ್ಮ ಬಾಳಿಗೆ ಮುಂಜಾವು ಯಾವಾಗ ಬರುವುದು ಎಂದು ಅನಿಸಿದಾಗ......

ನಮ್ಮಲ್ಲಿ ಇರುವ ಬಣ್ಣಗಳ ಭೇದ...ಜಾತಿ ಧರ್ಮಗಳ ಭೇದಗಳು ಅಳಿತಾಗ....

ಕಷ್ಟ ಸುಖವನ್ನು ಒಂದೆಂದು ಕಂಡಾಗ...

ರಾತ್ರಿಯನು...ಬೆಳಕಿನ ಮುನ್ನುಡಿ ಎಂದು ಕಂಡಾಗ....

ಪ್ರಾಯಶಃ ನಮಗೂ ಬೆಳಕು ಕಾಣುವುದು......




ಬರ್ತೈತಿ ಬರ್ತೈತಿ ನೋಡ ಮುಂಜಾವು

ಬೆಳಕಿನ ನಡಿಗೆಗೆ ತಾಮಸ ಥರ ಥರ ಅಂಜಾವು.....


ಎಲ್ಲ ಬಣ್ಣಗಳ ಒಂದೆಡೆ ಕಟ್ಟುವ

ನಮ್ಮ ಕನಸಿನ ಮುಂಜಾವು.....

ಎಲ್ಲ ಬಳ್ಳಿಗಳ ತನ್ನೆಡೆ ಸೆಳೆಯುವ

ಬೆಳಕೇ ಅದು ಮುಂಜಾವು....


ಸುಡುತಿರೋ ಸೂರ್ಯನು

ತಣಿಸುವ ನೆರಳು

ಒಂದೆಂದರೆ

ಅದೇ ಮುಂಜಾವು.....


ಮುಳುಗುವ ಸೂರ್ಯನು

ನಾಳೆಯ ಬೆಳಕಿಗೆ

ನಾಂದಿ ಎಂದರೆ

ಮುಂಜಾವು.....


ಇರುಳಲಿ ಬೆಳಕಲಿ

ನದಿಯಲಿ ಕಡಲಲಿ

ನನ್ನಲಿ ನಿನ್ನಲಿ

ಇರುವವನ ಅರಿತರೆ..ಮುಂಜಾವು.....


ಬೆಳಕನು ಹುಡುಕುತ ಹೊರಡಲೇ ಎಂದು

ನಾನು ನೀನು ಹುಟ್ಟಿವೆ ಎಂದು

ಅರಿತ ದಿನವೇ ಮುಂಜಾವು.....


ಬರ್ತೈತಿ ಬರ್ತೈತಿ ನೋಡ ಮುಂಜಾವು....

ಇಂದಲ್ಲ ನಾಳೆ ಬರ್ತೈತಿ ಮುಂಜಾವು......

Monday, September 6, 2010

ಜನಪದ ಹಾಡು......

ಮುನ್ನುಡಿ: ಮೊನ್ನೆ TV ಯಲ್ಲಿ ಒಂದು ಹಾಡುಗಳ Reality Show ನೋಡ್ತಿದ್ದೆ.ಅಂದು ಅದರಲ್ಲಿ ಜಾನಪದ ಹಾಡುಗಳ Round.ಅದರಲ್ಲಿ ಹಾಡುವ Participants ಗಳು ತಮ್ಮ ತಮ್ಮ ಸರದಿಯ ಪ್ರಕಾರ ಹಾಡುವಾಗ, ಅವರಿಗೆ ಉಳಿದವರೆಲ್ಲ Chorus ಆಗಿ ಹಾಡುತ್ತ ಇದ್ದರು....ಅದನ್ನು ನೋಡಿದಾಗ...ಜಾನಪದ ಎಂದರೆ ಅದೇ ಅಲ್ಲವೇ,"ಎಲ್ಲರೂ ಸೇರಿ ಹಾಡುವ ಹಾಡು".....ಅಂತ ಈ ನನ್ನ ಪೆದ್ದು ತಲೆಗೆ ಹೊಳೆಯಿತು.....


ಎಲ್ಲ ವಿಷಯದಲ್ಲೂ ನಾವು ಎಲ್ಲರೂ ಇವತ್ತು Solo ಆಗಿ ನಮ್ಮ ಹಾಡು ನಾವು ಹಾಡುತ್ತ ಇದ್ದೇವೆ. ಆದರೆ ನಾವೆಲ್ಲರೂ ಒಂದಾಗಿ ಯಾವತ್ತು ಹಾದುತ್ತೆವೋ...ಅವತ್ತೇ ನಮ್ಮೆಲ್ಲರಿಗೆ ಜಯ ದೊರಕುವುದು....ಅವತ್ತೇ ನಮಗೆ ಈ Solo(ಸೋಲೋ....?)ಇಂದ ಮುಕ್ತಿ....


ಶಿಷ್ಟ ಸಾಹಿತ್ಯಕ್ಕೆ ಹಾಡುವ ಹಾಡು ಹಾಗು ಜಾನಪದ ಸಾಹಿತ್ಯಕ್ಕೆ ಹಾಡುವ ಹಾಡುಗಳಲ್ಲಿ ಒಂದು ಮೂಲಭೂತವಾದ Difference ಎಂದರೆ, ಅದು ಆ ಹಾಡುಗಳಲ್ಲಿ ಇರುವ Energy Level. ನನ್ನ ಪ್ರಕಾರ ಜಾನಪದ ಹಾಡನ್ನು ಹಾಡುವವರ ಮನದಲ್ಲಿ ಅಷ್ಟೇ ಅಲ್ಲದೆ ಅವರ ದೇಹದಲ್ಲಿ ಕೂಡ ದೇವರು ಹೊಕ್ಕಿ ಹಾಡಿಸಬೇಕಾಗುತ್ತದೆ. ಇದು ಅಂತ ಮೈ ನವಿರೇಳಿಸುವ ಸಂಗೀತ.


ಹಾಗೇ ಜಾನಪದ ಹಾಡುಗಳ ವಿವಿಧ ಆಯಾಮಗಳು, ಈ ಹಾಡುಗಳಲ್ಲಿ ಇರುವ ಜೀವನ ಮೌಲ್ಯದ ಕಥೆಗಳು ಹಾಗು ಒಂದು ಜಾಗೃತ ಸಮಾಜದ ಸೃಷ್ಟಿಗೆ ಜಾನಪದ ಹಾಡುಗಳ ಕೊಡುಗೆ ಬಗ್ಗೆ ಯೋಚಿಸುತ್ತ ಇರುವಾಗ, ಈ ಸಾಲುಗಳು ಹರಿದವು.....




ಹಾಡು ಹಾಡು ನೀ ಹಾಡೊಂದನ್ನು

ಎಲ್ಲರೂ ಕೂಡುವ ಹಾಡೊಂದನ್ನು.......

ನನ್ನ ನಿನ್ನ ಎಲ್ಲರ ಹಾಡನ್ನು

ಎಲ್ಲರೂ ಹಾಡುವ ಹಾಡೊಂದನ್ನು.....



ಪದ ಪದ ಪೋಣಿಸೆ ಪದವಾದೀತು

ಎಲ್ಲರೂ ಹಾಡಲು, ಜನಪದವಾದೀತು.....

ಹಾಡಬೇಕು ಆ ಹಾಡೊಂದನ್ನು

ಜನರನು ಬೆಸೆಯುವ ಹಾಡೊಂದನ್ನು.....



ತಾತನ ಕಥೆಗಳು ಕಲಿಸುವ ಹಾಡು

ಅಜ್ಜಿಯ ತುತ್ತಲಿ ಬೆರೆತಿರೋ ಹಾಡು

ಇವುಗಳ ಸೇರಿಸಿ ಹಾಡನು ಮಾಡು

ಜನಪದವೆಂದು, ಅದನು ನೀ ಹಾಡು......



ಕಲ್ಲನು ಉಳಿಯು ಮೀಟುವ ಹಾಡು

ಹನಿಗಳು ಧರೆಯನು ತೊಳೆಯುವ ಹಾಡು.....

ಕಾಡಲಿ ಗಾಳಿಯು ಓಡುವ ಹಾಡು

ಮನವನು ಕುಣಿಸುವ ಜನಪದ ಹಾಡು.....



ಮಾರಮ್ಮ ಮೈ ಹೊಕ್ಕಿ, ಬೀರಪ್ಪ ಕುಣಿದಿರಲು

ತಮಟೆಯ ತೊಗಲು ಹಾಡುವ ಹಾಡು......

ನಡೆ-ನಡೆದು ಬಿದ್ದಾಗ, ದುಡಿ-ದುಡಿದು ಸತ್ತಾಗ

ಹುರಿದುಂಬಿಸಿ ಎತ್ತುವಾ ಜನಪದ ಹಾಡು......



ಸುಗ್ಗಿಯ ಸವಿಯಲು ಹಾಡುವ ಹಾಡು

ಮೈ ಕೈ ಕುಲಕಿಸಿ ಹಾಡುವ ಹಾಡು....

ಆತ್ಮ ಜ್ಯೋತಿಯನು ಝಾಳಪಿಸಿ ಹಾಡು....

ನನ್ನ ನಿನ್ನಲಿ ಹುಟ್ಟಿದ ಹಾಡು

ಎಲ್ಲರ ಬೆಸೆಯುವ ಜನಪದ ಹಾಡು......

Wednesday, July 28, 2010

ಗಂಡೆದೆಯ ತಟ್ಟಿ ತಟ್ಟಿ ಏಳಿ...

ಮುನ್ನುಡಿ: ಇಂದಿನ ಸಮಾಜದಲ್ಲಿ ಇರುವ ರಾಷ್ಟ್ರಭಕ್ತಿ ಹೀನತೆಯನ್ನು ಕಂಡು ಬೇಸತ್ತ ಭಾರತಿ......ತನ್ನ ಮಕ್ಕಳನ್ನು ಬಡಿದೆಬ್ಬಿಸುವ ಪರಿ ಇದು.....

ನಾವೆಲ್ಲರೂ ಇಂದು ದೇಶವನ್ನು ನಮ್ಮ ವ್ಯವಹಾರದ ಒಂದು ವಸ್ತುವಾಗಿ ಮಾಡಿರುವುದೇ ಹಾಗು ಪೂರ್ತಿಯಾಗಿ Career Oriented ಆಗಿರೋದೆ ಆಕೆಯ ಬೇಸರಕ್ಕೆ ಕಾರಣ....

ಒಂದು ದೈಹಿಕವಾಗಿ ಹಾಗು ಮಾನಸಿಕವಾಗಿ ಸದೃಢ ಸಮಾಜವನ್ನು ಕಟ್ಟಲು ಕೊಡುವ ಕರೆ ಇದು.....

ಹಾಳು ಬಿದ್ದಿರುವ ನಮ್ಮ ಮನಸನ್ನು ಹೂತು ಹದ ಮಾಡುವುದಕ್ಕೆ ಇಟ್ಟ ಮೊರೆ ಇದು.....





ನಾ ಹಡೆದ ಮಕ್ಕಳು ನೀವು ನೂರು ಕೋಟಿ

ನನ್ನನೇ ಮುಗಿಸಲೆಂದು ನಿಮ್ಮ ಪೋಟಿ

ನನ್ನ ಪಣಕಿಟ್ಟಿಹಿರಿ ಇಂದು ಏಕೆ

ಪಾಂಡವರಿಗಿಂತ ನೀಚರಾದಿರೇಕೆ......

ಏಳಿ ಏಳಿ ಇನ್ನು ನೀವೆಲ್ಲ ಏಳಿ

ಮಲಗುವ ಸಮಯವಿದಲ್ಲ ಕೇಳಿ......



ಗಲ್ಲಿ ಗಲ್ಲಿಗಳಲ್ಲಿ

ಸಂದಿ ಗೊಂದಿಗಳಲ್ಲಿ

ಹೊರಳುವಾ ಹುಳುಗಳೆಲ್ಲ ಏಳಿ

ತಾಯಿ ಕೂಗುತಿಹಳು ನೀವೆಲ್ಲ ಕೇಳಿ....



ಜಟ್ಟಿ ಬಳಗವ ಕಟ್ಟಿ

ಸಮರ ದೀಕ್ಷೆಯ ತೊಟ್ಟಿ

ಶತ್ರು ಪಡೆಯನು ಮೆಟ್ಟಿ ಮೆಟ್ಟಿ ಏಳಿ...

ಗಂಡೆದೆಯ ತಟ್ಟಿ ತಟ್ಟಿ ಏಳಿ...

ತಾಯಿ ಕೂಗುತಿಹಳು ನೀವೆಲ್ಲ ಕೇಳಿ....



ಹಾಳು ಹೊಲವ ಹೂತು ನೀವು

ಬೆವರ ಜಳಕ ಮಾಡಿ ಏಳಿ...

ತಾಯಿಯನ್ನು ಮನದಲಿಟ್ಟು

ನಿತ್ಯ ಕರ್ಮ ಮಾಡಿ ಏಳಿ....

ತಾಯಿ ಕೂಗಿಗಿಂದು ನೀವು
ಎಲ್ಲರೂ ಓಗೊಟ್ಟು ಏಳಿ...


ಬನ್ನಿ ಬನ್ನಿ ನೀವು ಎದ್ದು

ತಾಯಿ ನಿಮ್ಮ ಕೂಗುತಿದ್ದು...

ಬನ್ನಿ ನೀವು ಪಗಡೆ ತೊರೆದು

ತಾಯಿಯನ್ನು ಉಳಿಸಲೆಂದು

ಏಳಿ ಏಳಿ ಎಲ್ಲ ಏಳಿ

ತಾಯಿ ಕೂಗ ಕೇಳಿ ಏಳಿ......

ಗಟ್ಟಿ ಗಟ್ಟಿಯಾಗಿ ಎಲ್ಲ
ಜಯ ಭಾರತಿ....ಎಂದು ಹೇಳಿ.....

ಇರಲೆಬೇಕಾ ಇಲ್ಲಿಯೇ....?

ಮುನ್ನುಡಿ: ಇಳಿವಯಸ್ಸಿನಲ್ಲಿ ಕೆಲವೇ ದಿನಗಳ ಹಿಂದೆ ತನ್ನ ಹೆಂಡತಿಯನ್ನು ಕಳೆದು ಕೊಂಡಿರುವವನು, ಮೌನವೇ ನನ್ನ ಆಸರೆ ಅಂತ ಕೂತಿರುವಾಗ...ಹಾಗೇ ಹಳೆಯ ಒಂದು ಪುಸ್ತಕವನ್ನು ತಿರುವಿ ಹಾಕುತ್ತಿರುವಾಗ ಅದರಲ್ಲಿ ಒಣಗಿದ ಹೂವೊಂದು ಸಿಕ್ಕಿತು...ಅದನ್ನು ಆಕೆ ಎಷ್ಟೋ ವರ್ಷಗಳ ಹಿಂದೆ ಅವನಿಗೆ ಕೊಟ್ಟಿದ್ದಳು....ಆ ಹೂವಿನ ಸುಗಂಧದಲ್ಲಿ ಅವನು ಆಕೆಯ ನೆನಪುಗಳನ್ನು ಹುಡುಕುತ್ತ ಇರುವಾಗ.....


ಮೌನವೇ ಬಾ ಕೂರು ಇಲ್ಲಿ
ಮಾತಿಗೇನಿದೆ ಅವಸರ....
ಅಯ್ಯೋ...ತಡೆಯೋ...ಕಣ್ಣ ಬಿಂದು
ಜಾರಬೇಡ ಸರಸರ.....
ಮೌನವೇ ನೀ ಕೇಳು ಇನ್ನು
ನೀನೆ ನನ್ನ ಆಸರೆ....
ನನ್ನ ಆಕೆ ಬಿಟ್ಟು ಹೊರಟು
ಕಾಡುತಿಹಳು ಅಪ್ಸರೆ....

ಬಾಡಿಹೋದ ಸುಮವ ಹಿಡಿದು
ಘಮವ ಹೀರುವ ಕಾತರ......
ಪುಟದಿ ಹೂತ ಘಮವು ಇಂದು
ತೋರಿತು ನೆನಪಿನ ಸಾಗರ......

ನಿನ್ನ ಪುಣ್ಯ ನಿನ್ನನಿಂದು
ಕರೆದು ಹೋಗಿದೆ ಅಲ್ಲಿಗೆ....
ಪಾಪಿ ನಾನು ಇನ್ನು ಮುಂದೆ
ಇರಲೆಬೇಕಾ ಇಲ್ಲಿಯೇ....?

ಸ್ವರ್ಗದಲ್ಲಿ ಕುಂದು ಕೊರತೆ
ಇರುವುದೆಂದು, ನೀ ಹೇಳಲು.....
ನಾನು ಅಲ್ಲಿಗೆ ಬರುವೆ ಅವರ
ಏಕೆ ಎಂದು ಕೇಳಲು.....

ನನ್ನ ನಿನ್ನ ಜೋಡಿ ಮಾಡಿದ
ದೇವರೆಲ್ಲಿಗೆ ಹೋದನು....
ನನ್ನು ಅವನು ಕೂಗಿ ಕರೆದರೆ
ಇಲ್ಲ ಎಂದು ಹೇಳೆನು.....

Wednesday, July 14, 2010

ಜನ ಸರೀ ಇಲ್ಲ ತಂದೆ.....

ಮುನ್ನುಡಿ: ಮೊನ್ನೆ ಮೈಸೂರಿಗೆ ಹೋದಾಗ....ನಂಜನಗೂಡು ಹತ್ತಿರ ಇರುವ ಒಂದು ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ವಿ....

ಆ ದೇವರು ಕೇಳಿದ್ದನ್ನು ಎಲ್ಲ ಕೊಡುತ್ತಾನೆ ಅನ್ನೋ ಒಂದು ನಂಬಿಕೆ ಇದೆ.....ಅದಕ್ಕೆ ಅಲ್ಲಿಯ ಜನ ಅವನಿಗೆ....ಹುಚ್ಚು ವೇಣುಗೋಪಾಲ ಸ್ವಾಮಿ ಅಂತ ಕರೀತಾರೆ....ಇದನ್ನು ಕೇಳಿ ಬಹಳ ನೋವಾಯಿತು.

ಕೇಳಿದ್ದನ್ನೆಲ್ಲ ಕೊಟ್ಟರೆ...ಜನ ದೇವರನ್ನು ಕೂಡ ಹುಚ್ಚು ಮಾಡ್ತಾರೆ ಅನ್ನೋದಕ್ಕೆ ಇದು ಸೂಕ್ತ ಉದಾಹರಣೆ.....

ಅಲ್ಲಿ ಇದ್ದ ದೊಡ್ಡ Queue ನಲ್ಲಿ ಕಾದೂ ಕಾದೂ ಸುಸ್ತಾದಾಗ ...ಈ ಕವಿತೆ ಹುಟ್ಟಿತು....





ಆಗಲ್ಲಿ ಹೋಗಿ, ಈಗಿಲ್ಲಿ ಬಂದು

ಈ ಗಲ್ಲಿ ಗುಡಿಯ ಮುಂದೆ....

ಗಲ್ಲಿ ಗುಡಿಯ ಹಂಗ್ಯಾಕ ನನಗ

ನಾ ನಿನ್ನ ಒಳಗಾ ಮಿಂದೆ.....


ನಾ ಕೇಳಿದೆಲ್ಲ ನೀ ಕೊಡಲೆಬೇಡ...

ಜನ ಸರೀ ಇಲ್ಲ ತಂದೆ.....

ನಿನ್ನನಾ ಅವರು ಹುಚ್ಚು ಎಂಬುವವರು

ನಾ ಹೇಳುತೀನಿ ಇಂದೇ.....


ನೀ ಕುಂತೆ ಒಳಗೆ

ನಾ ನಿಂತೆ ಹೊರಗೆ

ಯಾಕಾ...ಹಿಂಗ ತಂದೆ...

ನಿನ್ನನ ನೋಡಲು ನಾನು ಯಾಕ

ಬರಬೇಕು ಒಳಗೆ ಎಂದೆ....


ಭಕ್ತ ಜನರು

ಯಾಕ್ಹಿಂಗ ಇವರು

ನಿನ್ನ ಬಂಧಿ ಮಾಡಿ....

ಗುಹೆಯಲ್ಲಿ ನಿನ್ನ

ಇಟ್ಟಿಹರು ಇವರು

ತಿಳಿಯರು ನಿನ್ನ ಮೋಡಿ.....


ನಿನ್ನ ನೋಡಲು

ಯಾರು ತಡೆವರು

ನನ್ನ ಇನ್ನು ಮುಂದೆ......

ಇಲ್ಲೇ ನಾನು ನಿಂತೆ ಈಗ

ಕಣ್ಣ್ಮುಚ್ಚಿ, ಬಾ... ಎಂದೆ....

ಅದು ಮನವು ನುಡಿವ ಭಾಷೆ.....

ಮುನ್ನುಡಿ: ನಮ್ಮ ಭಾವನೆಗಳನ್ನು ನಾವು ಶಬ್ಧಗಳಲ್ಲಿ ಸಂಪೂರ್ಣವಾಗಿ ಹೇಳಲು ಸಾಧ್ಯವಿಲ್ಲ.......ಅದನ್ನು ಕೇವಲ ಅನುಭವಿಸಬಹುದು ಅಷ್ಟೇ.......ಹಾಗೆಯೇ......ಬರೀ ಮಾತಿನಲ್ಲಿ ನಾವು ದೇವರ ನೆನೆದರೆ....ಅದು ಅವನಿಗೆ ಸೇರುವುದಿಲ್ಲ....ಮನಸ್ಸು ಅವನಲ್ಲಿ ಮೊರೆಯಿಟ್ಟರೆ ಮಾತ್ರ...ಅದು ಅವನನ್ನು ಮುಟ್ಟುತ್ತದೆ.....


ಅವೂ ಶಬ್ಧಗಳು.... ಏನೂ ಹೇಳವು

ಪೂರ್ತಿ ಭರ್ತಿ ಭಾಷೆ(ಭಾವನೆ + ಆಶೆ= ಭಾಷೆ)

ಮಾತಾಡು ಮನವೇ ನೀ ತಿಳಿಸಬೇಕು

ಆವಗ ನನ್ನ ಆಶೆ......



ಆ ಮಡಿಲ ಮಲಗಿ

ಈ ಹೆಗಲ ಎರಗಿ

ಕಂಡಂತ ಕನಸ ಭಾಷೆ.....

ಮೂಕ ಶಬ್ಧಗಳು ನುಡಿಯಲಾರವು

ಮನದ ಮಹಾ ಆಶೆ.....



ಆ ತಾಯಿ ನಗುವ

ಈ ಮಗುವು ಅಳುವ

ನಡುವೆ ಹರಿವ ಭಾಷೆ.....

ಶಬ್ಧಗಳು ಅಲ್ಲಿಗೆ ಹೋಗಲಾರವು

ಅದು ಮನವು ನುಡಿವ ಭಾಷೆ.....



ಹಾಡು ನನ್ನದು, ಕೇಳದು ನಿನಗೆ

ಶ್ಲೋಕ ಯಾವುದೂ ತಾಗದು ನಿನಗೆ

ಯಾವುದು ನಿನ್ನ ಭಾಷೆ....

ನೀ ಕರೀ ಮನವೇ, ಅವ ನನ್ನ ಕಡೆ

ಅದೇ ಆಶೆ ಇದು, ನನ್ನ ಕಡೇ.....



ನಾನ್ಯಾರು ತಂದೆ

ನಾನ್ಯಾಕೆ ಬಂದೆ

ನೀ ಹೇಳಬೇಕು ಇಂದೇ.....

ನಿನ್ನಲ್ಲಿ ನಾನು

ನನ್ನಲಿ ನೀನು

ಬೆರೆಯುವುದು ಎಂದು ಎಂದೆ.......

Tuesday, July 13, 2010

ರಾತ್ರಿ ಇದು ಕಳೀಬೇಕು.........

ಮುನ್ನುಡಿ: ಇಂದಿನ ಸಮಾಜದಲ್ಲಿ ಅಧರ್ಮದ ವಿಸ್ತಾರವನ್ನು ಕಂಡಾಗ....ಈ ಸಮಾಜದ ಶುದ್ಧೀಕರಣಕ್ಕೆ....ಇನ್ನೊಂದು ಧರ್ಮ ಯುದ್ಧದ ಅಗತ್ಯವಿದೆ ಅಂತ ಅನಿಸುತ್ತದೆ....ಅಂತ ಒಂದು ಧರ್ಮ ಯುದ್ಧಕ್ಕೆ ನಾಂದಿ ಹಾಡಿ ಮುನ್ನೆಡೆಸಲು ಒಬ್ಬ ಕೃಷ್ಣ....ಹಾಗು ಪ್ರಳಯ ರೂಪದಲಿ ಅಂತ್ಯ ಮಾಡಲು ಒಬ್ಬ ರುದ್ರ ಬೇಕಾಗಿದ್ದಾರೆ........

ರಾತ್ರಿ ಇದು ಕಳೀಬೇಕು
ಬಳಗ ಎದ್ದು ನಡೀಬೇಕು
ಸೂರ ನೀವು ತೊರೀಬೇಕು
ಧರ್ಮ ಯುದ್ಧವಾಗಬೇಕು
ಇನ್ನು ಜಗದಲಿ......

ಸಾರಥಿ ಅವ ನಮಗೆ ಬೇಕು
ಚಾಟಿಯನವ ಬೀಸಬೇಕು
ವೇದ ಸುತ್ರವ ಬಿಗಿಯಬೇಕು
ಗೀತೆ ಮತ್ತೆ ಹಾಡಬೇಕು
ಪಾಂಚಜನ್ಯ ಮೊಳಗಬೇಕು
ಮತ್ತೆ ಜಗದಲಿ......

ತಂದೆ-ತಾಯಿ ನಿಮಗೆ ನಮಿಸಿ
ಧರ್ಮ ಮಾತೆ ಕರೆಯನರಸಿ
ಹೊರಡಬೇಕು ಎಂದು ಅನಿಸಿ
ಹೇ ಮಕ್ಕಳೇ...ನಮ್ಮ ಕ್ಷಮಿಸಿ
ನಿತ್ಯ ಸತ್ಯ ಕುಣಿಯಬೇಕು
ಮತ್ತೆ ಜಗದಲಿ......

ಎಲ್ಲ ಇಹರು ಆಚೆ ಕಡೆಗೆ
ಬಹಳ ಇಲ್ಲ ಈಚೆ ಕಡೆಗೆ
ರಕ್ತ ನೆಲವು ಎಲ್ಲ ಕಡೆಗೆ
ಕಲ್ಲು ಕೋಳಿ ಕೂಗುವರೆಗೆ
ಮತ್ತೆ ಸೂರ್ಯ ಬರುವವರೆಗೆ
ಯುದ್ಧ ಜಗದಲಿ......

ಶಿವನೆ ನೀನು ಕುಣಿಯಬೇಕು
ಪರ್ವತವದು ಸಿಡಿಯಬೇಕು
ಸಾಗರಗಳು ಉಕ್ಕಬೇಕು
ರಕ್ತ ನೆಲವ ತೊಳೆಯಬೇಕು
ದುಷ್ಯಾಸನಿಗಳು ಅಳೆಯಬೇಕು
ಧರ್ಮ ಮತ್ತೆ ನೆಲೆಸಬೇಕು
ಇನ್ನು ಜಗದಲಿ......

ವೀರಾವೇಷವು ನಮಗೆ ಬೇಕು
ಸಮುದ್ರ ಮಂಥನವಾಗಲೇ ಬೇಕು
ನಂಜನು ನಾವು ಕುಡಿಯಲೇಬೇಕು
ಅಮೃತ ನಾಳೆಗೆ ಉಣಿಸಲೇಬೇಕು
ಧರ್ಮ ಯುದ್ಧಕೆ ಹೊರಡಲೇಬೇಕು
ನಾವು ಈ ರಾತ್ರಿಯಲಿ..........

ನಾನು ನೀನು ಇನ್ನು ಯಾರು
ಧರ್ಮಯುಧ್ಹಕೆ ಹಾರು ಹಾರು
ವೀರ ಮರಣವು ಹೊಂದಬೇಕು
ನಾವು ಇದರಲಿ.........
ವೀರ ಮರಣವು ಹೊಂದಬೇಕು
ನಾವು ಇದರಲಿ.........

Tuesday, July 6, 2010

ಜನ್ಮವಲ್ಲ ನಿಂದು....ಅವತರಣ......

ಮುನ್ನುಡಿ: ತಾಯಿಯ ಎಲ್ಲ ಕರ್ಮಗಳಲ್ಲಿರುವ ನಿಸ್ವಾರ್ಥತೆಯ ಭಾವ....ನಿನ್ನ ನಗುವಿಗೆ..ಆಕೆ ತನ್ನ ಅಳುವನ್ನು....ಹಾಗು ನಿನ್ನ ಅಳುವಿಗೆ..ಆಕೆ ತನ್ನ ನಗುವನ್ನು.....ಬಲಿ ಕೊಡುತ್ತಾಳೆ ....

ಆಕೆ ಎಂದೂ ತನ್ನ ಕಷ್ಟಗಳನ್ನು ಹೇಳಿಕೊಳ್ಳುವುದಿಲ್ಲ...ಅದಕ್ಕೆ ಆಕೆ ಮೂಗಿ....ಮಕ್ಕಳು ಆಕೆಯ ನೋವನ್ನು ಕೇಳುವುದಿಲ್ಲ...ಅದಕ್ಕೆ ಅವರು ಕಿವುಡರು.....

ಅಂತಹ ಒಂದು ನಿಸ್ವಾರ್ಥ ಜೀವನ ಬರೇ ಒಂದು ಜನ್ಮವಾಗಿರಲು ಸಾಧ್ಯವಿಲ್ಲ.....ಅದು ಒಂದು ಅವತರಣವೇ ಸರಿ......



ನಿನ್ನ ಭಾರವ ಆಕೆ ಹೊತ್ತಿಹಳು

ಭಾರವಲ್ಲವದು ಎಂದು ತಿಳಿದಿಹಳು

ನಿನ್ನ ಜನನಕೆ ಆಕೆ ಕಾದಿಹಳು

ಕನಸುಗಳೆಷ್ಟೂ ಆಕೆ ಕಂಡಿಹಳು

ಪ್ರಸವ ನೋವಿನಲಿ ಆಕೆ ಕೂಗಿಹಳು

ಜೀವವೊಂದಕೆ ನಾಂದಿ ಹಾಡಿಹಳು...

ಮಗುವ ಅಳುವಿಗೆ....ನಗುವುತಲಿಹಳು....

ಕೇಳದು ಆ ನಗುವು

ಯಾಕೆ ನಮ್ಮ ಕಿವಿಗೆ

ಮಾಸಿತು ಆ ನಗುವು.....

ನಿನ್ನ ಅಳುವ ಒಳಗೆ...



ಹಳೆಯ ಹಸಿರು ಸೀರೆಯ...ಆಕೆ ಉಟ್ಟಿಹಳು

ಹರೆದ ಸೆರಗನು ಆಕೆ ಮುಚ್ಚಿಹಳು

ಗಾಜಿನ ಬಳೆಯ ಆಕೆ ತೊಟ್ಟಿಹಳು...

ಕಾಸನು ಸೇರಗಂಚಿನಲಿ ಕಟ್ಟಿಹಳು

ಮಗಳಿಗೆ ಚಿನ್ನವ ಕೊಳ್ಳಲು ಹೊರಟಿಹಳು

ಮಗಳ ನಗುವಿಗೆ.....ನಗುವುತಲಿಹಳು....

ಕೇಳದು ಆ ನಗು

ಯಾಕೆ ನಮ್ಮ ಕಿವಿಗೆ

ಮಾಸಿತು ಆ ನಗುವು.....

ನಿನ್ನ ನಗುವ ಒಳಗೆ...



ಮನೆಯನು ತೊರೆದು ಮಗಳು ಹೊರಟಿಹಳು

ಮನದೊಳು ತಾಯಿ ಅವಳ ಹರೆಸಿಹಳು

ಕಣ್ಣೀರನ್ನು ಆಕೆ ಸುರಿಸಿಹಳು

ಮನದ ಹಿಂಡುವಿಕೆಯ...ಆಕೆ ಬಣ್ಣಿಸಳು .....

ತನ್ನ ನೋವನು ಹೇಳಳು ಅವಳು...

ಕೇಳದು ಆ ನೋವು

ಯಾಕೆ ನಮ್ಮ ಕಿವಿಗೆ

ಮಾಸಿತು ಆ ನೋವು.....

ನಿನ್ನ ನೋವ ಒಳಗೆ...



ಮಧ್ಯರಾತ್ರಿಯದು ಅವನೂ ಮಲಗಿಹನು

ಪಾಶ ಹಿಡಿಯುತಲಿ ಯಮನು ಬರುತಿಹನು

ಆಕೆಯೆಡೆಗೆ ಅವ ನೆಡೆದು ಬರುತಿಹನು

ಕ್ಯಯ ಮುಗಿದು ಅವ ಇಂತಿ ಎಂದಿಹನು

ಸಮಯ ಮುಗಿಯಿತು....ತಾಯೆ ಎಂದಿಹನು

ಸ್ವರ್ಗ ಕಾದಿಹುದು ಎಂದು ತಿಳಿಸಿಹನು

ಕೊನೆಯ ಆಸೆಯ ಅವನು ಕೇಳಿಹನು ......

ಮಗುವು ಮಲಗಿಹುದು..... ಎಂದು ಹೇಳಿದಳು

ಎಬ್ಬಿಸದಿರು ಅವನ...... ಎಂದು ಬೇಡಿದಳು...

ಕೇಳಲಿಲ್ಲ ಆ ಮೊರೆಯು ಮಗಗೆ......

ಅವನ ಸುಖ ನಿದ್ರೆಯೇ ಲೇಸು ಅವಗೆ.....



ಮೂಕ ತಾಯೆ.....ನೀನು ಯಾಕೆ........?

ಕಿವುಡ ಮಕ್ಕಳ ಹೆತ್ತೆಯಾಕೆ.........?

ಜನ್ಮವಲ್ಲ ನಿಂದು....ಅವತರಣ......

ಮರಣವಲ್ಲವದು......ಮಹಾಮರಣ......

ಹರಸುತಿರು ಎಂದೂ....ನೀನು ಎನ್ನ....

ಬರುವೆನು ಮತ್ತೆ ನಾನು ಆ ಮಡಿಲಿಗೆ ನಿನ್ನ.....

Monday, July 5, 2010

ಯಾರ ಹಂಗಿಂದು ಎನಗೆ....

ಮುನ್ನುಡಿ: ದೇವರೊಂದಿಗೆ ಒಂದು connection ಕಲ್ಪಿಸಿಕೊಂಡಿರುವ ಆತ್ಮವು.....ದೇಹಕ್ಕೆ ನೋವು, ನರಳುವಿಕೆ ಆದಾಗ...ಹೇಗೆ ಪ್ರತಿಕ್ರಿಯಿಸುತ್ತದೆ.....
ಅದು...ಈ ನೋವು ಒಂದು Temporary Phase ಅಂತ ತಿಳಿದಿರುತ್ತದೆ.....ದೇಹದ ಹಸಿವು(Materialistic ಹಸಿವು) ಹಾಗು ಆತ್ಮದ ಹಸಿವು(Spiritual ಹಸಿವು) ಹೇಗೆ ಭಿನ್ನ ಎಂಬುದನ್ನು ತೋರಲು........



ಒಂಟಿಯಾಗಿ ಹೊರಟಿಹೆ ಈ ಮರುಭೂಮಿಯೊಳು ನಾನು
ಸುಡುತಿಹುದು ದೇಹವೆಲ್ಲಾ....... ಬಾಯಾರುತಿಹುದು
ನಗುತಿಹುದು ಮನವು....ಕಾಯುವವ ನೀನಿರುವೆ ಎಂದು ಅರಿತು
ತಂಪಾದ ಗಂಗೆಯೊಂದು ಕಾದಿದೆ ಎನಗೆ ಈ ಮರಳಿನಾಚೆ ಎಂದು ಅರಿತು

ಹಸಿದು ಮಲಗಿರುವೆ ಎನ್ನ ಗುಡಿಸಿಲೊಳು ನಾನು
ಆಶಕ್ತವಾಗಿಹುದು ದೇಹವೆಲ್ಲಾ ...........ನರಳುತಿಹುದು
ಕುಣಿಯುತಿಹುದು ಮನವು....ಬರುವೆ ನೀನು ಎಂದಾದರೂ ಎಂದು ಅರಿತು
ಸಿಹಿಹಣ್ಣನೋತ್ತ ಕಲ್ಪವೃಕ್ಷವೊಂದು ಕಾದಿಹುದು ಮನಕೆ....ದೇಹದ ಈ ಹಸಿವಿನಾಚೆ ಎಂದು ಅರಿತು

ಸ್ವೀಕರಿಸು ದೇಹದ ಈ ಪೂರ್ಣಾಹುತಿಯನಿಂದು
ನಾ ನಡೆಸಿದ ಯಾಗವು ಸಂಪೂರ್ಣವಿಂದು
ಹೊರಟಿದೆ ದೀಪವು ಮಣ್ಣಿನ ಹಣತೆಯನಗಲಿ ಇಂದು
ಯಾರ ಹಂಗಿಂದು ಎನಗೆ....ನೀನೆ ಎನ್ನ ಗುರಿ ಎಂದು

Saturday, July 3, 2010

ನೀನೇ ಹೇಳಮ್ಮ.......

ಮುನ್ನುಡಿ: ಬ್ರಹ್ಮಾಂಡದ(ಬ್ರಹ್ಮ+ಅಂಡ) ರಚನೆಯು ಒಂದು ಘೋರವಾದ ಶಬ್ದದಿಂದ(Big Bang) ಆಯಿತು ಅಂತ ಹೇಳುತ್ತಾರೆ.....
ಆದರೆ ಕವಿಯ ಪ್ರಕಾರ....ಒಂದು ಜೀವದ ಬರುವಿಕೆಗೆ Big Bang ಬೇಕಾಗಿಲ್ಲ.....ಒಂದು ಮಗುವ ಅಳುವೇ ಆ ಜೀವನದ ಆದಿಯ ಸಂಕೇತ




ಗೂಡೊಂದನ್ನು ಕಟ್ಟಿಹ ಬ್ರಹ್ಮ
ಮೊಟ್ಟೆಯು ಅದರೊಳಗೆ ಇಟ್ಟಿಹನಮ್ಮ
ಕಾವನು ಅವನು ಕೊಟ್ಟಿಹನಮ್ಮ
ಕನಸೊಂದನ್ನು ಕಂಡಿಹನಮ್ಮ

ಮೂಡನು ಮನುಜನು ಅರಿಯನವನಮ್ಮ
ಸೃಷ್ಟಿಯ ಹುಟ್ಟ ತಿಳಿಯನವನಮ್ಮ
ಘೋರ ಶಬ್ಧದಿ ಎಂಬುವನಮ್ಮ
ಮೂಡನು ಅವನು ಬೀಗುವ ಸುಮ್ಮ

ಮಗುವ ಮೊದಲ ಅಳುವು....
ಘೋರವೇನಮ್ಮ.....?
ಸೃಷ್ಟಿಯ ರೂಪ ಹೇ ತಾಯೆ...
ನೀನೇ ಹೇಳಮ್ಮ.......

Thursday, July 1, 2010

ರಸಿಕ conductor

ಅಂದು ಶುಕ್ರವಾರ...ರಾತ್ರಿ ಸುಮಾರು ಹತ್ತು ಘಂಟೆ ಆಗಿತ್ತು....ನಾನು ಅಂದು ನಮ್ಮ ಊರಿಗೆ ಹೊರಟಿದ್ದೆ...ಮಜೆಸ್ಟಿಕ್ ಬಸ್ ಸ್ಟ್ಯಾಂಡ್ ನಲ್ಲಿ ನನ್ನ ಬಸ್ಸಿಗೆ ಕಾಯುತ್ತ ಕುಳಿತಿದ್ದೆ......ಮುಂಗಾರು ಅಂದು ತಾನು ಬರುತ್ತಿರುವೆ....... ಎಂದು...ಮೆಘಸಂದೆಶ ಒಂದನ್ನು ಕಳುಹಿಸಿತ್ತು......ಮೋಡಗಳು...ಮಧ್ಯಾಹ್ನದಿಂದಲೇ ಊರಲ್ಲೆಲ್ಲ ಆವರಿಸಿದ್ದವು......ಆಗ ತಾನೇ...ಸಣ್ಣಗೆ ಮಳೆಯೂ ಶುರುವಾಗಿತ್ತು..ಸ್ವಲ್ಪ ಹೊತ್ತಿನಲ್ಲೇ ನನ್ನ 'ರಾಜಹಂಸವು' ಕೊಡ ಬಂತು..ನಾನು ನುಸಿ ಮಳೆಯಲ್ಲಿ ಓಡುತ್ತಾ ಹೋಗಿ ನನ್ನ ಹಂಸವನ್ನು ಏರಿ ಕುಳಿತೆ.....



ಬಸ್ಸಿನಲ್ಲಿ ಒಂದೂ ಚಂದವಾದ ಹುಡುಗಿ ಇಲ್ಲ....ಆದರೂ ಸೀಟಿ ಹೊಡೆದುಕೊಂಡು ಓಡಾಡುತ್ತಿದ್ದ ನಮ್ಮ ರಸಿಕ conductor ಅನ್ನು ನೋಡಿ ಮನದಲ್ಲೇ ತುಸು ನಕ್ಕು...ಕಿವಿಗೆ earphoneಗಳನ್ನೂ ಚುಚ್ಚಿಕೊಂಡು ಹಾಡು ಕೇಳಲಾರಂಭಿಸಿದೆ....ಅದರಲ್ಲಿ ನಾದಮಯ ಎಂಬ ಮಧುರವಾದ ಹಾಡು ಬರುತ್ತಿತ್ತು....



ಹಾಗೆ ಕಿಟಕಿಯ ಪರದೆ ಸರಿಸಿ ಹೊರ ನೋಡಿದೆ....ಮಳೆಯೂ ಜೋರಾಗಿ ಬರಲಾರಂಭಿಸಿತ್ತು .....ಅದನ್ನು ನೋಡುತ್ತಾ....ನನ್ನ ಕವಿಮನಕ್ಕೆ...ಒಹ್...ಮುಂಗಾರು ಈ 'ನಾದಮಯ'ವಾದ ಹಾಡಿಗೆ ಕುಣಿಯುತ್ತಿದಾಳಾ...?ಅಂತ ಅನಿಸಿತು... ಇಂಥ ಹಲವು ಹುಚ್ಚ್ಚು ಯೋಚನೆಗಳು ಬರಲಾರಂಭಿಸಿದವು.....ಹಾಗೆ........seatನ ಮೇಲೆ ಒರಗಿಕೊಂಡು ಕಣ್ಣು ಮುಚ್ಚಿದೆ.....ಬಸ್ ಕೂಡ ಹೊರಟಿತು.....



ಅಷ್ಟರಲ್ಲೇ....ಹಿಂದಿನಿಂದ ಯಾರೋ ಒಬ್ಬರು..ರೀ...conductor ಸಾಹೇಬರೇ.......ಅಂತ ಕೂಗಿದರು....ಯಾರು ಅದು ಅಂತ ಹಿಂದೆ ತಿರುಗಿ ನೋಡಿದೆ...ಒಬ್ಬ...ಹಿರಿಯರು...ನಿಂತಿದ್ದರು....ಏನ್ರೀ ಇದು...ನೀರು ಎಲ್ಲ ಒಳಗೆ ಸೋರುತ್ತಿದೆ.. ಅಂತ ಕೂಗಿದರು....ನಮ್ಮ conductor ಬಂದು....ತನ್ನ ಕನ್ನಡಕವನ್ನು ಹಾಕಿಕೊಂಡು...Sherlock Holmes levelನಲ್ಲಿ investigate ಮಾಡಿದರು.... ಸರ್....ಬನ್ನಿ ...ನನ್ನ ಸೀಟ್ ಬಿಟ್ಟು ಕೊಡ್ತೇನೆ...ಅಂತ ಅಂದು.....'ಸೋರುತಿಹುದು...ಮನೆಯ ಮಾಳಿಗಿ...ಅಜ್ಞಾನದಿಂದ....' ಅಂತ ಹಾಡುತ್ತ ಡ್ರೈವರ್ ಕಡೆಗೆ ಹೊರಟರು...



ಒಂದೇ ಕಲಾತ್ಮಕ ವಾಕ್ಯದಲ್ಲಿ ಸಾರಿಗೆ ಸಂಸ್ಥೆಯ ಪಾಡನ್ನು ಬಣ್ಣಿಸಿದ ಆ conductorಗೆ ಮನಸಲ್ಲೇ ಮೆಚ್ಚುಗೆ ವ್ಯಕ್ತಪಡಿಸುತ್ತಾ....ನಾನು ಮತ್ತೊಮ್ಮೆ...ಕುಣಿಯುತ್ತಿದ್ದ ಮುಂಗಾರನ್ನು ನೋಡಿ...ಹಾಗೆ .......ಕಣ್ಣು ಮುಚ್ಚಿ ನನ್ನ ಹಾಡು ಹಾಗು ನನ್ನ ಹುಚ್ಚ್ಚು ಭಾವನೆಗಳಿಗೆ ಮರಳಿದೆ.....

Thursday, June 17, 2010

ಬಾ ಇನಿಯ........ಬಳ್ಳಿ ಬಾಡಿ ಹೋಗುವ ಮುನ್ನ



ಮುನ್ನುಡಿ: ಆತ್ಮವು...ತನ್ನನ್ನು ಸೃಷ್ಟಿಸಿದ ಆ ಪರಮಾತ್ಮನಿಗೆ ಕಾಯುತ್ತಿದೆ.......
ಅಂಧಕಾರವೇ...ತುಂಬಿದ ಈ ಬಾಳಲಿ....ಆ ಬೆಳಕಿಗೆ ಕಾಯುತ್ತಿದೆ.......
ಸಹಸ್ರಾರು ವರ್ಷಗಳಿಂದ....ಒಂದಲ್ಲ ಇನ್ನೊಂದು ನಶ್ವರ ದೇಹದಲಿ ಬಂಧಿಯಾಗಿದೆ.......
ಈ ಸುತ್ತಾಟ ಸಾಕು....ಬಾ....ಎಂದು ಆತ್ಮವು ಕೂಗಿದಾಗ........
ಅದು ಕವಿಗೆ ಹೀಗೆ ಕಂಡಿತು......






ಕಾಲದಿಂದಲೂ ಕಾದಿಹವು ಕಂಗಳಿವು ನಿನಗೆ
ಎಂದು ಮೂಡುವುದೋ ಆ ಬೆಳಕು ಎಂದು ಕಾಯುತ
ಕುಳಿತಿಹೆ ನಿಷೆಯೋಳು ಹೊಸ್ತಿಲಲಿ, ಆ ಗಾಡಾನ್ಧಕಾರದ ಪಥವನ್ನು ದಿಟ್ಟಿಸುತ
ಎಂದು ಬರುವುದೋ ಆ ಬೆಳಕು ನನ್ನ ಗುಡಿಸಲಿಗೆ ಎಂದು ನಿಟ್ಟುಸಿರಿಡುತ

ಸಹಸ್ರ ಗ್ರೀಷ್ಮಗಳು ಸುಟ್ಟರೂ ಬಾಡದಿಹ ಬಳ್ಳಿಯಿದು
ಹೂವನೋತ್ತು ನಲಿಯುತಿಹುದು ಬರುವುದು ಆ ದುಂಬಿ ಎಂದು ಕಾಯುತ
ಸಹಸ್ರ ಆಶಾಢಗಳಿಗೂ ನಂದಲಾರದ ದೀಪವದು
ಉರಿಯುತಿಹುದು ಸಿಗುವುದು ತನಗೆ ಆ ಬೆಳಕು ಎಂದು..... ಎಂದು ಕಾಯುತ

ಸಂಸಾರ ಸಾಗರದೊಳು ಮಿಂದು ಬೆಂದಿಹೆ ನಾನು, ಮುಪ್ಪಾಗಿಹುದು ಈ ಮೇಲ್ಪದರ
ಹುಟ್ಟು ಸಾವಿನ ಚಕ್ರದೊಳು ಸುತ್ತಿ ಬಾಯಾರುತಿಹೆ ನಾನು

ಬಾ ಇನಿಯ........ಬಳ್ಳಿ ಬಾಡಿ ಹೋಗುವ ಮುನ್ನ
ಹೂವು ಉದುರುವ ಮುನ್ನ, ದೀಪವು ನಂದುವ ಮುನ್ನ

ನಿನ್ನನು ಸೇರಲು ಬರುತಿಹೆ ನಾನು........



ಮುನ್ನುಡಿ: ಆತ್ಮವು...ಪರಿಪಕ್ವ ಆದಾಗ.....ಆ ಮಹಾ ಶಕ್ತಿಯು....ಅದರಲ್ಲಿ ಅವತರಿಸುವುದೆಂದು ಹೇಳುತ್ತಾರೆ......
ಹಾಗೆ ಅವತರಿಸುವ ಕೊಂಚ ಮುನ್ನ....ಅವತರಿಸುವ ವೇಳೆ...ಹಾಗು ಅವತರಿಸಿದ ನಂತರ.....
ಆ ಕ್ಷಣಾರ್ಧದಲ್ಲಿ ..........ಮನಸ್ಸಿನಲ್ಲಿ ಹಾಗು ದೇಹದಲ್ಲಿ ಆಗುವ ಅನುಭವಗಳ ಒಂದು ನೆರಳು ಇದು.....




ಗರಿಗೆದರಿ ಕುಣಿಯುತಿಹಳು ಮನಮಯೂರಿ
ಜ್ಞಾನಗಂಗೆಯು ವೃಷ್ಟಿ ರೂಪದೊಳು ಅವತರಿಪಳೆಂದು ತಿಳಿದು
ಭೋರ್ಗರೆದು ಉಕ್ಕುತಿಹುದು ಒಳಗಡಲು
ತಾಳುವೆನೆ...... ಆ ಅವತರಿಪ ಶಕ್ತಿಯನ್ನು ಎಂದು ತಿಳಿಯದು

ಶುಭ್ರವಾದ ಶಕ್ತಿಯದು ಧುಮುಕುತಿಹುದು ನನ್ನೆಡೆಗೆ
ತೊಳಿಯುತಿಹುದು ಒಳಗುಡಿಯನ್ನು, ಕರಗಿಸುತಿಹುದು ಮಲಿನ ಮೂರ್ತಿಯನು
ಕಳಚಿದೆ ಸೆರೆಯು,ಮೂಡಿದೆ ಬೆಳಕು
ಸಾಕು ಇಂದು ನಿನಗೆ ಈ ದೇಹದ ಹಂಗು...ನಡೆ ನನ್ನೆಡೆಗೆ ಎನ್ನುತಿಹುದು

ಹರಿಯುತಿಹೆನು ನಾನು ಈ ಜ್ಞಾನಗಂಗೆಯೊಳು
ಕರೆದೊಯ್ಯುತಿಹುದು ಎಲ್ಲಿಗೆ ಇದು ಎನ್ನನು
ಮೂಡಲಾಚೆಗೆ ಹೊರಟಿಹೆ ನಾನು
ನಿನ್ನನು ಸೇರಲು ಬರುತಿಹೆ ನಾನು

ನಡೆ ನಡೆ ನೀ ಗುರಿಯೆಡೆಗೆ.....



ಮುನ್ನುಡಿ: ನಮಗೆ ಇರುವ ಸಾಮರ್ಥ್ಯವನ್ನು ನಾವು ಅರಿಯದೆ....ನಮ್ಮ ಮನಸ್ಸನ್ನು ನೋಡಲು ಸಹ ಧೈರ್ಯವಿಲ್ಲದ ನಮಗೆ ......ಒಂದು ನಿರರ್ಥಕವಾದ, ಸಾರ್ಥಕತೆ ಇಲ್ಲದ ಜೀವನ ನಡೆಸುವ ಇಂದಿನ ಸಮಾಜಕ್ಕೆ....
ತಾಯಿ ತಂದೆ,ಗುರು ಹಿರಿಯರು....ಇವರ ಮಾರ್ಗದರ್ಶನವನ್ನು ತಿರಸ್ಕರಿಸಿ ನಡೆಯುತ್ತಿರುವ ಸಮಾಜಕ್ಕೆ.....ಗುರಿಯ ತೋರಿಸಲು ಅವರ ಅವಶ್ಯಕತೆ ಇದೆ.....




ಹೆದರಬೇಡ ನೀ ಕಣ್ಣಬಿಡೋ .....
ಒಳಹೊಕ್ಕು ನಿನ್ನನು ನೀನು ನೋಡೂ....
ಒಳಗೆ ಚೇತನವು ಒಂದಿಹುದೋ ....
ನಿನ್ನ ಲಕ್ಷ್ಯಕೆ ಕಾದಿಹುದೋ ....
ಕೋಟಿ ಲಿಂಗಗಳ ಶಕ್ತಿ ಅದೂ...
ಸುಪ್ತವಾಗಿ ಏಕೆ ಕುಳಿತಿಹುದೋ....

ಎದ್ದು ನಡೆ ನೀ ಗುರುವೆಡೆಗೆ....
ತೋರುವ ದಾರಿ ಅವ, ಅವನೆಡೆಗೆ...
ಸ್ಪರ್ಶಿಸಿ ತಂದೆಯ ಕಾಲ್ ಗಳಿಗೆ ....
ಅರ್ಪಿಸಿ ತಾಯಿಯ ಚರಣಗಳಿಗೆ......
ನಡೆ ನಡೆ ನೀ ಗುರಿಯೆಡೆಗೆ.....
ನಡೆ ನಡೆ ನೀ ಗುರಿಯೆಡೆಗೆ.....

ಇದೆ ಅಲ್ಲವೇ ಆಕೆಯ ಬಯಕೆ.....



ಮುನ್ನುಡಿ: ಜೀವನದುದ್ದಕ್ಕೂ....ದೇವರನು ಹುಡುಕಿ ಹೊರಟಾಗ....ಯಾವ ದಾರಿಯಲಿ ಅವನು ಸಿಗುವನು ಎಂದು ತಿಳಿಯದಿದ್ದಾಗ........
ಆತ್ಮಕ್ಕೆ ದೇಹವೇ ಒಂದು ಕರಾಗೃಹವು ಅಂತ ಎನಿಸಿದಾಗ.......ಅವನನ್ನು ಸೇರಲು....ಈ ದೇಹವನು ಬಿಟ್ಟು ಅದು ಹೋಗಬೇಕು ಎಂದನಿಸಿದಾಗ....






ಚಿಮ್ಮುತಿಹುದು ಚಿಲುಮೆಯೊಂದು ಒಳಮನಸ್ಸಿನಲಿ ಇಂದು
ಹೊರಟಿಹಳು ತನ್ನ ನಲ್ಲನರಸಿ ಹುಡುಕುತ ಬಳಕುತ ಇಂದು
ಶತಪಥ ಸಹಸ್ರ ಕವಲುಗಳ ದಾರಿಯೊಳು
ತನ್ನ ಇನಿಯನ ಆಲಿಸುತ ಹೊರಟಿಹಳು ಇಂದು

ಹಪಿಸುತಿಹುದು ಹಕ್ಕಿಯೊಂದು ಗೂಡುಬಿಟ್ಟು ಹಾರಲೆಂದು
ಕಡಲಾಚೆಗೆ, ಮುಗಿಲಾಚೆಗೆ, ನಿತ್ಯ ಪುಟಿಯುವ ರವಿ ಶಶಿಗಳಾಚೆಗೆ
ಸರಿಸು....... ಈ ಮಸಣ ಬೂಧಿಯನು ಇಂದು
ಬಿಡುಗಡೆಗೆ ಕಾದಿಹುದು ಒಳಗೆ ಕೆಂಡ ಒಂದು

ಸಾಕು ಈ ವಿರಹ......ತಾಳಲಾರೆ ಎಂದಳಾಕೆ
ಬಿಗಿದಪ್ಪಿ ಕರೆದೊಯ್ಯಿ ಆಕೆಯನು ನಿನ್ನ ಅಂತಃಪುರಕ್ಕೆ
ಲೀನವಾಗಲಿ ನಿನ್ನೋಳಗಾಕೆ
ಇದೆ ಅಲ್ಲವೇ ಆಕೆಯ ಬಯಕೆ.........

ದಿಗಂತ



ಮುನ್ನುಡಿ: ಒಳಮನಸ್ಸಿಗೆ .....ಸೃಷ್ಟಿಕರ್ತನ ಕೂಗು ಕೇಳಿಸಿದಾಗ........ಅದನ್ನು ಅರಸಿ ಹೋಗಬೇಕೋ .....ಇಲ್ಲವೋ.....ಅಂತ ತಿಳಿಯದಿದ್ದಾಗ........
ನನ್ನನು ನಾನು....ಅವನ ಹತ್ತಿರ ಹೋಗುವಷ್ಟು ಶುಭ್ರವಾಗಿ ಇಟ್ಟುಕೊಂಡಿದ್ದೇನ.....?..ಎಂಬುವ ಭಾವನೆ ಮನಸ್ಸಿನಲ್ಲಿ ಮೂಡಿದಾಗ........
ಹರಿದ ಸಾಲುಗಳಿವು......





ದೂರ ದಿಗಂತದೊಳು ಯಾರೋ ಎನ್ನ ಕೂಗುತಿಹರಾ........ತಿಳಿಯದು
ಒಳಗಡಲ ವೀಣೆಯನ್ನು ಮೀಟಿ ಅಲೆಗಳೆಬ್ಬಿಸುತಿಹರಾ.....ಕೇಳದು
ಕಳಚು ಈ ದೇಹಜಾಲವ, ಈಜು ನನ್ನೆಡೆಗೆ ಎಂಬುತಿಹರು ಯಾರದು......

ಈ ಮಲಿನ ಹೆಗ್ಗಡಲಾಚೆ ಈಜಲು ಸಾಧ್ಯವೇ ನನಗೆ.........ತಿಳಿಯದು
ಇದರ ದಾಟಿದ ಮೇಲೆಯೂ ನಾನು ಇರುವೆನೆ ಶುಭ್ರವು.......ಕಾಣದು
ನಿನ್ನೆಡೆ ಈಜಲು ಎನ್ನನು ಈಗ ದೂಡುತಿಹರು....ಯಾರದು......

ನಿನ್ನೋಳಗಿಂದ ಬಂದಿಹ ನನಗೆ
ನಿನ್ನನು ಸೇರಲು ಏಕೀ ಕಾತರ.......
ಎಲ್ಲರೂ ನೀನು ನಮ್ಮೋಳಗೆ ಎಂಬರು
ನಿನ್ನನು ಹುಡುಕಲೆಕೀ ಹಂಬಲ......

ಋಣಿ

ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡು ಸಲಹಿದ ಕಡಲಿಗೆ ಆ ಮುತ್ತು ಋಣಿ
ತನ್ನ ರಸವನ್ನೇ ಉಣಬಡಿಸಿದ ಹೂವಿಗೆ ಆ ದುಂಬಿ ಋಣಿ
ತನ್ನ ಮಡಿಲಲ್ಲಿ ಗೂಡಿಗೆ ಜಾಗ ಕೊಟ್ಟ ಮರಕ್ಕೆ ಆ ಹಕ್ಕಿ ಋಣಿ

ತಾನು ಸಲಹಿದ ಬಿಂದು ಮುತ್ತಾಯಿತೆಂಬ ಭಾವಕ್ಕೆ ಕಡಲು ಯಾರಿಗೆ ಋಣಿ
ತಾನು ಸಿಹಿ ಹಣ್ಣು ಆದೆನೆಂಬ ಸಾರ್ಥಕತೆಗೆ ಹೂವು ಯಾರಿಗೆ ಋಣಿ
ಒಂಟಿಯಾದ ಹೆಮ್ಮರಕ್ಕೆ ಹಾಡಿ ಮುದ ನೀಡಿದ ಹಕ್ಕಿಗೆ ಯಾರು ಋಣಿ

ನನ್ನೊಳಗೆ ನೀನಿರಿಸಿದ ಚೇತನಕ್ಕೆ ನಾನೂ....?
ಆ ಚೇತನಕ್ಕೆ ಮಾಧ್ಯಮವಾದ ನನಗೆ ಅದೋ.... ?
ನಮ್ಮಿಬ್ಬರ ಮಿಲನ ಮಾಡಿಸಿದ ನಿನಗೆ ನಾವೋ.....?
ನಿನ್ನನ್ನು ಆರೆಸಿ ಹೊರಟಿಹ ನಮಗೆ ನೀನೋ.....?

Tuesday, June 15, 2010

ರುದ್ರನು ತಾಂಡವವಾಡುವುದೆಂದು......?


ಮುನ್ನುಡಿ: ಈ ಕವನದಲ್ಲಿ......ಇಂದಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿರುವಂತಹ ಒಂದು ಕರಾಳತೆಯ ಚಿತ್ರೀಕರಣವಿದೆ .........

ಕಾಡು ಎಂಬುದು....ಇಲ್ಲಿ ಸಮಾಜವನ್ನು ಪ್ರತಿಬಿಂಬಿಸುತ್ತದೆ.......

ಗುಡಿ ಎಂಬುದು......ನಮ್ಮ ದೇಹ.....

ಅದರೊಳಗೆ ಇರುವವನು.....ಆತ್ಮ....

ಕವಿಯ ಪ್ರಕಾರ ಇಂಥ ಒಂದು ಸಮಾಜವು..........ಪ್ರಳಯಕ್ಕೆ ಸಿದ್ಧವಾಗಿದೆ............

ಇಲ್ಲಿ ಪ್ರಳಯ ಎಂದರೆ.........ಅಧರ್ಮವನು ತೊಳೆಯುವ....ಹಾಗು ಹೊಸತಾದ ಹಾಗು ಶುಭ್ರವಾದ ಒಂದು ಸಮಾಜವನ್ನು ರಚಿಸುವುದಕ್ಕೆ ಮುನ್ನುಡಿ.........



ದಟ್ಟ ಕಾಡಿನ ನಡುವೆ, ಕಾರಗತ್ತಲೇ ಒಳಗೆ

ನಿಶಾಚರಿ ಚಂದ್ರನು ಅಂಜಿ ಅಡಗಿಹನು ಮೋಡದ ಕವದಿಯ ಒಳಗೆ

ಮಸಣ ಮೌನವು ತಬ್ಬಿಹುದು ಧರೆಯನು ಈ ಕ್ಷಣದೊಳು

ಮಾಟಗಾತಿಯ ನಗುವು ತುಂಬಿಹುದು ಮರುಕ್ಷಣದೊಳು



ಗುಡಿಯೊಂದಿಹುದು ಕಾಡಿನ ನಟ್ಟ ನಡುವೆ

ಬರಲಾದ ನ್ಯಾಯವೃಕ್ಷವು ನಿಂತಿಹುದು ಅದರ ಬದಿಗೆ

ಬಾವಲಿಗಳ ಹಿಂಡು ಸುತ್ತುತಿಹುದು ಗೊಪುರವನು

ನರ್ತಿಸುತಿಹವು ಕ್ಶುದ್ರಶಕ್ತಿಗಳು, ಮುತ್ತಿಹವು ಅಂಗಳವನು



ಗರ್ಭಗುಡಿಯ ಬಾಗಿಲು ಮುಚ್ಚಿಹುದು,

ಜೇಡರ ಬಲೆಯು ಅದನು ಅಪ್ಪಿಹುದು

ಧೂಳಿನ ಅಭಿಷೆಕವನು ಸ್ವೀಕರಿಸುತಿಹನವನು ಒಳಗೆ

ಕಣ್ಣ ಅಂಚಿನಲಿ ಭರವಸೆಯನಿಟ್ಟು ಕಾಯುತಿಹನು ಯಾರಿಗೆ



ಹುದುಗಿಹೋದ ಧರ್ಮದ ಜ್ವಲಾಮುಖಿಯೊಂದು ಕುದಿಯುತಿಹುದು ಇಂದು

ಸಿಡಿದು, ಸರಿದು, ಬಿರಿದು, ಹರಿದು. ಜರಿಯುವುದು ಎಂದು?

ರುದ್ರವೀಣೆಯು ನುಡಿಯುವುದು ಎಂದು?

ರುದ್ರನು ತಾಂಡವವಾಡುವುದೆಂದು ?

ಆರ್ನಾ



ಮುನ್ನುಡಿ: ನನ್ನ ಅಕ್ಕನ ಮಗಳ ಹೆಸರು - ಆರ್ನಾ(ಲಕ್ಷ್ಮಿ ದೇವಿಯ ಒಂದು ರೂಪ). ಆ ಮಗುವನ್ನು ಕಂಡ ಮೊದಲ ಬಾರಿ ನನ್ನೊಳಗೆ ಮೂಡಿದ ಭಾವನೆಗಳನ್ನೂ ಕ್ರೋಡೀಕರಿಸುವ ಒಂದು ಪ್ರಯತ್ನ ಇದು.

ಒಂದು ಜೀವವು ಬರುವುದಕ್ಕೆ ಮನುಷ್ಯರು ಅಥವಾ ಪ್ರಾಣಿಗಳು ನೆಪ ಮಾತ್ರ.......ಅದರ ನಿಜವಾದ ತಂದೆ ಪರಮಾತ್ಮ ಹಾಗು ತಾಯಿ ಪ್ರಕೃತಿ ಎಂಬ ಭಾವನೆ ಇದರೊಳಗಿದೆ.

ಹಳೆಗನ್ನಡದ ಕೆಲವು ಶಬ್ಧಗಳ ಪ್ರಯೋಗ ಇಲ್ಲಿ ಆಗಿರುವುದರಿಂದ, ತಮ್ಮ ಅನುಕೂಲಕ್ಕೆ ಅದರ ಶಬ್ಧಾರ್ಥಗಳನ್ನು, ಈ ಪುಟದ ಕೊನೆಯಲ್ಲಿ ಬರೆದಿದ್ದೇನೆ......


ದೇವರ ಕನಸೊಂದು ಬಂದಿಹುದು ಮನೆಗಿಂದು

ಸೃಷ್ಟಿಯ ಮಗಳಿವಳು ಬಂದಿಹಳು ಧರೆಗಿಂದು

ಪ್ರಕೃತಿ ಪರಮಾತ್ಮನ ಮಿಲನದಿಂ ಉದ್ಭವಿತ ಚೇತನವಿದು

ನಿನ್ನ ಕನಸ ಕಾಯುವ ಹೊಣೆಯು ಮಾತ್ರ ನನದು


ರವಿಯು ನೀಡಿಹನು ತೇಜಸ್ಸು ಈ ಮುಖಕೆ, ಶಶಿಯು ನೀಡಿಹನು ಕಾಂತಿ ಈ ಕಣ್ಣಿಗೆ

ಉಷೆಯು ನೀಡಿಹಳು ತನ್ನ ಸಿಂಧೂರದ ಕೆಂಪನ್ನು ತುಟಿಗೆ

ಹೊಮಾಗ್ನಿಯು ಹೊತ್ತಿಸಿಹುದು ದೀಪವು ಇವಳ ಒಳಗೆ

ಈ ದೀಪವ ಕಾಯುವ ಹೊಣೆಯು ಮಾತ್ರ ನನಗೆ


ನುಂಗೊರೋಲೋಳು ನುಡಿವೇಣಿ ಇಹಳು

ಪಣ್ಣನೆ ನಡೆತದೋಲ್ ಪಣೆಗಣ್ಣನಿಹನು

ಅಚ್ಚ ಅಚ್ಚರೆಯು ಆರ್ನೆಯು ಇವಳು

ಕರ್ಣದೊಲ್ ಪಿಸುಗುಡುತಿಹನು ಪದ್ಮನಾಭನು, ನಗುತಿಹಳು ಇವಳು


ಕೃತಜ್ಞತೆಗಳು ಈ ಹೊಣೆಗೆ ನಿನಗೆ

ಇದನು ಕಾಯುವ ಸ್ಥೈರ್ಯ ನೀಡು ನನಗೆ


ನುಂಗೊರೋಲೋಳು - ಮಧುರ ವಾದ ಕೊರಳೊಳು, ಮಧುರ ವಾದ ಕಂಠದೊಳಗೆ

ನುಡಿವೇಣಿ - ನುಡಿಯ ದೇವಿ, ವಾಗ್ದೇವಿ, ಸರಸ್ವತಿ

ಪಣ್ಣನೆ - ಮೆಲ್ಲಗೆ

ಪಣೆಗಣ್ಣ - ಪಣೆ - ಹಣೆ , ಹಣೆಯ ಮೇಲೆ ಕಣ್ಣು ಇರುವವ, ಶಿವ

ಅಚ್ಚ - ಶುದ್ಧ , ಪವಿತ್ರ

ಅಚ್ಚರೆ - ಹೆಣ್ಣು ದೇವತೆ

ಕವಿಯ ನಲ್ಲೆ......


ಮುನ್ನುಡಿ: ಅಂದೊಂದು ದಿನ......ನನ್ನ ಮನಸಲ್ಲಿ ಬಹುತೇಕ ಮೂಡಿದ ಭಾವನೆ ಒಂದನ್ನು....ಕಾತರದಿಂದ ಬರೆಯಲು ಕುಳಿತಾಗ....ಏಕೋ...ಭಾವನೆಗಳು ಹರಿಯಲಿಲ್ಲ.....ಶಬ್ಧಗಳು ಮೂಡಲಿಲ್ಲ....

ಆ ಕ್ಷಣದಲ್ಲಿ.....ನಾನು ಕರೆದಾಗ ಕವನವು ಬರಲಿಲ್ಲವೆಂಬ ಭಾವನೆಯೇ....ವಿರಹವು ಅಂತ ಅನಿಸಿದಾಗ...ಮೂಡಿಬಂದ ಸಾಲುಗಳಿವು..........



ಇಷ್ಟು ಸನಿಹಕೆ ಬಂದು

ಮರೆಯಾದೆ ಏಕೆ ನಲ್ಲೆ

ಮನವನು ಕದಡಿ.......

ಮನಸನು ಮುದುಡಿ.......

ಹೊರಟೆ ಎಲ್ಲಿಗೆ

ಎಲೆ ನಲ್ಲೆ.......



ಪ್ರೇಮ ಪಾಶವ

ಬಿಗಿದು ಕೊರಳಿಗೆ

ಸರೆದರೆ ನೀನು

ಉಳಿಯೆನೆ ನಾನು.....?

ಕೂಗಿ ಕರೆಯಲಾರೆ

ನಿನ್ನನು ನಾನು

ಮನವು ತುಂಬಿಹುದು

ಕೊರಳು ತಂಗಿಹುದು

ಅರಿಯೆಯ ನೀನು.....



ನಗುತಿರುವ

ಎಲೆ ಚಂದ್ರನೇ ನೀನು

ನನ್ನ ರೂಪಸಿಯ

ನೀನೆ ಕರೆದೊಯ್ದೆಯೇನು

ಬಯಲಾಚೆಗೆ ಓಡುತಿರುವೆ

ಏಕೆ ವಾಯುವೆ ನೀನು

ಸ್ವರ್ಗದೊಳಿಹ ಅಪ್ಸರೆಯರು

ನಿನಗೆ ಸಾಲದೇನು



ಕೈಲಾಸದೊಳಿಂ ಕಣ್ಣ ಹಾಯಿಸು

ಶಿವನೆ ನೀನು

ದಕ್ಷ ಪುತ್ರಿಯು ಹೊರಟಾಗ

ಆದ ವಿರಹವನೂ ಮರೆತೆಯೇನು.....



ಸಾಧನೆಯ ಅಂಚಿನೊಳಿಹ

ಸಾಧಕನು ನಾನು

ಮುಕ್ಕಂಣನು ಮುನಿದರೂ

ನಿಲ್ಲುವೆನೆ ನಾನು.......?



ಕವಿಯ ನಲ್ಲೆ

ಎಲೆ ಕವನವೆ ನೀನು

ನನ್ನ ತೊರೆದರೂ ನೀನು.......

ನಿನ್ನನು ಬಿಡುವೆನೆ ನಾನು.....?

Sunday, June 13, 2010

ಇನ್ನೂ ಬರಬಾರದೇ.....


ಮುನ್ನುಡಿ: ರಾಧೆ ಮತ್ತು ಕೃಷ್ಣರ ಪ್ರೇಮವು.....ಶ್ರೆಷ್ಟಾತಿ ಶ್ರೇಷ್ಟ........ಪವಿತ್ರಾತಿ ಪವಿತ್ರ........
ಅವರ ಪ್ರೇಮಕ್ಕೆ.......ಸ್ಪರ್ಶದ ಹಂಗು ಇಲ್ಲ.... ಅದೇ ಅವರ ಪ್ರೇಮದ ಉತ್ಕುಷ್ಟತೆಯ ದ್ಯೋತಕ...
ಅಕೋ ಶ್ಯಾಮಾ....ಅವಳೇ ರಾಧೇ....ನಲಿಯುತಿಹರು ಕಾಣಿರೇ....
ಬನ್ನಿ.....ಅವರ ನಲಿವನು ಕಂಡು......ನಲಿಯುವ ನಮ್ಮ ಮನವನು ನೋಡೋಣಾ....



ಕರೆಯೇ ಕೋಗಿಲೆ
ನನ್ನ ಇನಿಯನ.......
ಮೊರೆಇಡುತಿದ್ದರು ....ನಾ...
ಮುನಿಸಿಕೊಂಡಿರುವನಾ.....

ಮನದ ಮಡಿಕೆಯಲಿ
ಭಾವನೆಗಳ ಮಜ್ಜಿಗೆಯ
ಕಡೆದವನನ.......
ತೇಲಿ ಬಂದ
ಒಲುಮೆಯ ಬೆಣ್ಣೆಯ
ಕದ್ದವನನ.......
ಕಳ್ಳ ಕೃಷ್ಣನಾ.......

ಸೂರ್ಯನು ಯಮುನೆಯ
ಕೆನ್ನೆಯ ಹಿಂಡಿ
ಕೆಂಪಾಗಿಸಿದಂತೆ.. .....ನಾ.....
ಅವನ ನೆರಳ ಸೋಕಿ
ಕೆಂಪಾಗಿರುವೆನಾ. .....?

ದಿಟ್ಟಿಯೋಳು ನನ್ನನು
ಮುಟ್ತುವನ.....
ಮುಟ್ಟದೆಯೇ....
ಮುಂಗುರುಳನು ನೇವರಿಸುವನ......

ಮನವು ಬರಿದಾಗಿದೆ.....
ಜಾರಿದ ಕಣ್ಣ ಬಿಂದುವು
ಕೆನ್ನೆಯ ಮೇಲೆ
ಗೆರೆ ಬರೆದಾಗಿದೆ......

ಹೃದಯದ ಒಳಗೆ
ಬರೆ...ತಾಗಿದೆ
ಕಣ ಕಣದಲ್ಲಿ
ನೀನು ಬೆರೆತಾಗಿದೆ
ಇನ್ನೂ ಬರಬಾರದೇ..... ?