Tuesday, July 13, 2010

ರಾತ್ರಿ ಇದು ಕಳೀಬೇಕು.........

ಮುನ್ನುಡಿ: ಇಂದಿನ ಸಮಾಜದಲ್ಲಿ ಅಧರ್ಮದ ವಿಸ್ತಾರವನ್ನು ಕಂಡಾಗ....ಈ ಸಮಾಜದ ಶುದ್ಧೀಕರಣಕ್ಕೆ....ಇನ್ನೊಂದು ಧರ್ಮ ಯುದ್ಧದ ಅಗತ್ಯವಿದೆ ಅಂತ ಅನಿಸುತ್ತದೆ....ಅಂತ ಒಂದು ಧರ್ಮ ಯುದ್ಧಕ್ಕೆ ನಾಂದಿ ಹಾಡಿ ಮುನ್ನೆಡೆಸಲು ಒಬ್ಬ ಕೃಷ್ಣ....ಹಾಗು ಪ್ರಳಯ ರೂಪದಲಿ ಅಂತ್ಯ ಮಾಡಲು ಒಬ್ಬ ರುದ್ರ ಬೇಕಾಗಿದ್ದಾರೆ........

ರಾತ್ರಿ ಇದು ಕಳೀಬೇಕು
ಬಳಗ ಎದ್ದು ನಡೀಬೇಕು
ಸೂರ ನೀವು ತೊರೀಬೇಕು
ಧರ್ಮ ಯುದ್ಧವಾಗಬೇಕು
ಇನ್ನು ಜಗದಲಿ......

ಸಾರಥಿ ಅವ ನಮಗೆ ಬೇಕು
ಚಾಟಿಯನವ ಬೀಸಬೇಕು
ವೇದ ಸುತ್ರವ ಬಿಗಿಯಬೇಕು
ಗೀತೆ ಮತ್ತೆ ಹಾಡಬೇಕು
ಪಾಂಚಜನ್ಯ ಮೊಳಗಬೇಕು
ಮತ್ತೆ ಜಗದಲಿ......

ತಂದೆ-ತಾಯಿ ನಿಮಗೆ ನಮಿಸಿ
ಧರ್ಮ ಮಾತೆ ಕರೆಯನರಸಿ
ಹೊರಡಬೇಕು ಎಂದು ಅನಿಸಿ
ಹೇ ಮಕ್ಕಳೇ...ನಮ್ಮ ಕ್ಷಮಿಸಿ
ನಿತ್ಯ ಸತ್ಯ ಕುಣಿಯಬೇಕು
ಮತ್ತೆ ಜಗದಲಿ......

ಎಲ್ಲ ಇಹರು ಆಚೆ ಕಡೆಗೆ
ಬಹಳ ಇಲ್ಲ ಈಚೆ ಕಡೆಗೆ
ರಕ್ತ ನೆಲವು ಎಲ್ಲ ಕಡೆಗೆ
ಕಲ್ಲು ಕೋಳಿ ಕೂಗುವರೆಗೆ
ಮತ್ತೆ ಸೂರ್ಯ ಬರುವವರೆಗೆ
ಯುದ್ಧ ಜಗದಲಿ......

ಶಿವನೆ ನೀನು ಕುಣಿಯಬೇಕು
ಪರ್ವತವದು ಸಿಡಿಯಬೇಕು
ಸಾಗರಗಳು ಉಕ್ಕಬೇಕು
ರಕ್ತ ನೆಲವ ತೊಳೆಯಬೇಕು
ದುಷ್ಯಾಸನಿಗಳು ಅಳೆಯಬೇಕು
ಧರ್ಮ ಮತ್ತೆ ನೆಲೆಸಬೇಕು
ಇನ್ನು ಜಗದಲಿ......

ವೀರಾವೇಷವು ನಮಗೆ ಬೇಕು
ಸಮುದ್ರ ಮಂಥನವಾಗಲೇ ಬೇಕು
ನಂಜನು ನಾವು ಕುಡಿಯಲೇಬೇಕು
ಅಮೃತ ನಾಳೆಗೆ ಉಣಿಸಲೇಬೇಕು
ಧರ್ಮ ಯುದ್ಧಕೆ ಹೊರಡಲೇಬೇಕು
ನಾವು ಈ ರಾತ್ರಿಯಲಿ..........

ನಾನು ನೀನು ಇನ್ನು ಯಾರು
ಧರ್ಮಯುಧ್ಹಕೆ ಹಾರು ಹಾರು
ವೀರ ಮರಣವು ಹೊಂದಬೇಕು
ನಾವು ಇದರಲಿ.........
ವೀರ ಮರಣವು ಹೊಂದಬೇಕು
ನಾವು ಇದರಲಿ.........

No comments: