Wednesday, July 14, 2010

ಜನ ಸರೀ ಇಲ್ಲ ತಂದೆ.....

ಮುನ್ನುಡಿ: ಮೊನ್ನೆ ಮೈಸೂರಿಗೆ ಹೋದಾಗ....ನಂಜನಗೂಡು ಹತ್ತಿರ ಇರುವ ಒಂದು ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ವಿ....

ಆ ದೇವರು ಕೇಳಿದ್ದನ್ನು ಎಲ್ಲ ಕೊಡುತ್ತಾನೆ ಅನ್ನೋ ಒಂದು ನಂಬಿಕೆ ಇದೆ.....ಅದಕ್ಕೆ ಅಲ್ಲಿಯ ಜನ ಅವನಿಗೆ....ಹುಚ್ಚು ವೇಣುಗೋಪಾಲ ಸ್ವಾಮಿ ಅಂತ ಕರೀತಾರೆ....ಇದನ್ನು ಕೇಳಿ ಬಹಳ ನೋವಾಯಿತು.

ಕೇಳಿದ್ದನ್ನೆಲ್ಲ ಕೊಟ್ಟರೆ...ಜನ ದೇವರನ್ನು ಕೂಡ ಹುಚ್ಚು ಮಾಡ್ತಾರೆ ಅನ್ನೋದಕ್ಕೆ ಇದು ಸೂಕ್ತ ಉದಾಹರಣೆ.....

ಅಲ್ಲಿ ಇದ್ದ ದೊಡ್ಡ Queue ನಲ್ಲಿ ಕಾದೂ ಕಾದೂ ಸುಸ್ತಾದಾಗ ...ಈ ಕವಿತೆ ಹುಟ್ಟಿತು....





ಆಗಲ್ಲಿ ಹೋಗಿ, ಈಗಿಲ್ಲಿ ಬಂದು

ಈ ಗಲ್ಲಿ ಗುಡಿಯ ಮುಂದೆ....

ಗಲ್ಲಿ ಗುಡಿಯ ಹಂಗ್ಯಾಕ ನನಗ

ನಾ ನಿನ್ನ ಒಳಗಾ ಮಿಂದೆ.....


ನಾ ಕೇಳಿದೆಲ್ಲ ನೀ ಕೊಡಲೆಬೇಡ...

ಜನ ಸರೀ ಇಲ್ಲ ತಂದೆ.....

ನಿನ್ನನಾ ಅವರು ಹುಚ್ಚು ಎಂಬುವವರು

ನಾ ಹೇಳುತೀನಿ ಇಂದೇ.....


ನೀ ಕುಂತೆ ಒಳಗೆ

ನಾ ನಿಂತೆ ಹೊರಗೆ

ಯಾಕಾ...ಹಿಂಗ ತಂದೆ...

ನಿನ್ನನ ನೋಡಲು ನಾನು ಯಾಕ

ಬರಬೇಕು ಒಳಗೆ ಎಂದೆ....


ಭಕ್ತ ಜನರು

ಯಾಕ್ಹಿಂಗ ಇವರು

ನಿನ್ನ ಬಂಧಿ ಮಾಡಿ....

ಗುಹೆಯಲ್ಲಿ ನಿನ್ನ

ಇಟ್ಟಿಹರು ಇವರು

ತಿಳಿಯರು ನಿನ್ನ ಮೋಡಿ.....


ನಿನ್ನ ನೋಡಲು

ಯಾರು ತಡೆವರು

ನನ್ನ ಇನ್ನು ಮುಂದೆ......

ಇಲ್ಲೇ ನಾನು ನಿಂತೆ ಈಗ

ಕಣ್ಣ್ಮುಚ್ಚಿ, ಬಾ... ಎಂದೆ....

3 comments:

PRaveen said...

GOod One SIR :):)

Gonchalu.......... said...

Thank you Praveen.....

ರೂಡಿಯೊಳಗಿನ ರೂಢಿಗಳು ... said...

Good dive in for the the real insight of kelade banda vara...varavaagiradu... nimma bhaava chennagide...