Wednesday, July 28, 2010

ಗಂಡೆದೆಯ ತಟ್ಟಿ ತಟ್ಟಿ ಏಳಿ...

ಮುನ್ನುಡಿ: ಇಂದಿನ ಸಮಾಜದಲ್ಲಿ ಇರುವ ರಾಷ್ಟ್ರಭಕ್ತಿ ಹೀನತೆಯನ್ನು ಕಂಡು ಬೇಸತ್ತ ಭಾರತಿ......ತನ್ನ ಮಕ್ಕಳನ್ನು ಬಡಿದೆಬ್ಬಿಸುವ ಪರಿ ಇದು.....

ನಾವೆಲ್ಲರೂ ಇಂದು ದೇಶವನ್ನು ನಮ್ಮ ವ್ಯವಹಾರದ ಒಂದು ವಸ್ತುವಾಗಿ ಮಾಡಿರುವುದೇ ಹಾಗು ಪೂರ್ತಿಯಾಗಿ Career Oriented ಆಗಿರೋದೆ ಆಕೆಯ ಬೇಸರಕ್ಕೆ ಕಾರಣ....

ಒಂದು ದೈಹಿಕವಾಗಿ ಹಾಗು ಮಾನಸಿಕವಾಗಿ ಸದೃಢ ಸಮಾಜವನ್ನು ಕಟ್ಟಲು ಕೊಡುವ ಕರೆ ಇದು.....

ಹಾಳು ಬಿದ್ದಿರುವ ನಮ್ಮ ಮನಸನ್ನು ಹೂತು ಹದ ಮಾಡುವುದಕ್ಕೆ ಇಟ್ಟ ಮೊರೆ ಇದು.....





ನಾ ಹಡೆದ ಮಕ್ಕಳು ನೀವು ನೂರು ಕೋಟಿ

ನನ್ನನೇ ಮುಗಿಸಲೆಂದು ನಿಮ್ಮ ಪೋಟಿ

ನನ್ನ ಪಣಕಿಟ್ಟಿಹಿರಿ ಇಂದು ಏಕೆ

ಪಾಂಡವರಿಗಿಂತ ನೀಚರಾದಿರೇಕೆ......

ಏಳಿ ಏಳಿ ಇನ್ನು ನೀವೆಲ್ಲ ಏಳಿ

ಮಲಗುವ ಸಮಯವಿದಲ್ಲ ಕೇಳಿ......



ಗಲ್ಲಿ ಗಲ್ಲಿಗಳಲ್ಲಿ

ಸಂದಿ ಗೊಂದಿಗಳಲ್ಲಿ

ಹೊರಳುವಾ ಹುಳುಗಳೆಲ್ಲ ಏಳಿ

ತಾಯಿ ಕೂಗುತಿಹಳು ನೀವೆಲ್ಲ ಕೇಳಿ....



ಜಟ್ಟಿ ಬಳಗವ ಕಟ್ಟಿ

ಸಮರ ದೀಕ್ಷೆಯ ತೊಟ್ಟಿ

ಶತ್ರು ಪಡೆಯನು ಮೆಟ್ಟಿ ಮೆಟ್ಟಿ ಏಳಿ...

ಗಂಡೆದೆಯ ತಟ್ಟಿ ತಟ್ಟಿ ಏಳಿ...

ತಾಯಿ ಕೂಗುತಿಹಳು ನೀವೆಲ್ಲ ಕೇಳಿ....



ಹಾಳು ಹೊಲವ ಹೂತು ನೀವು

ಬೆವರ ಜಳಕ ಮಾಡಿ ಏಳಿ...

ತಾಯಿಯನ್ನು ಮನದಲಿಟ್ಟು

ನಿತ್ಯ ಕರ್ಮ ಮಾಡಿ ಏಳಿ....

ತಾಯಿ ಕೂಗಿಗಿಂದು ನೀವು
ಎಲ್ಲರೂ ಓಗೊಟ್ಟು ಏಳಿ...


ಬನ್ನಿ ಬನ್ನಿ ನೀವು ಎದ್ದು

ತಾಯಿ ನಿಮ್ಮ ಕೂಗುತಿದ್ದು...

ಬನ್ನಿ ನೀವು ಪಗಡೆ ತೊರೆದು

ತಾಯಿಯನ್ನು ಉಳಿಸಲೆಂದು

ಏಳಿ ಏಳಿ ಎಲ್ಲ ಏಳಿ

ತಾಯಿ ಕೂಗ ಕೇಳಿ ಏಳಿ......

ಗಟ್ಟಿ ಗಟ್ಟಿಯಾಗಿ ಎಲ್ಲ
ಜಯ ಭಾರತಿ....ಎಂದು ಹೇಳಿ.....

4 comments:

Sriii :-) said...

Cool anup go on......

Gonchalu.......... said...

Thanks Sri......

Unknown said...

Thumba chanagide Anoop..hage munduvarisari nimma e sundara payana..

Gonchalu.......... said...

Thank you very much Chethan