Wednesday, August 17, 2011

ಉತ್ತಿಷ್ಠ ಭಾರತಿ

ಉತ್ತಿಷ್ಠ  ಭಾರತಿ, ಜಗತ್ ಸಾರಥಿ
ದೀಪ ನಾಡು ನೀ, ಜೀವ ನಾಡಿ ನೀ
ತೋರು ದಾರಿ ನೀ, ಜಗತ್ ಪಾಲಿನಿ
'ವಸುದೈವ ಕುಟುಂಬಕಂ' ಎಂದು ಸಾರು ನೀ
ಉತ್ತಿಷ್ಠ  ಭಾರತಿ, ಜಗತ್ ಸಾರಥಿ

ಹೇ ಮಾತೆ ನೀ, ಜಗನ್ ಮಾತೆ ನೀ
ಕೈ ಹಿಡಿದು, ಮನ ತೊಳೆದು
ನೆಡೆಸು ಭಾಗವತ್ ಜಾತೆ ನೀ
ದಾರಿ ತೋರು, ಇಂದು ನೀ
ಅಂದು ಇಂದು ಎಂದೂ ನೀ
ಬೆಳಕ ತೋರೋ ಮಾತೆ ನೀ

ನೀನೇ ಕಾರಣನೀನೇ ಹೂರಣ
ನೀನೇ ಪೂರಣ ಪೂರಣ
ಜಗತ್ ಭ್ರಮೆಗೆ, ಮಹತ್ ಭ್ರಮೆಗೆ
ನೀನೇ ಶಾಶ್ವತ ಮಾರಣ
ಅರಿವಿಗೆ ನೀನೇ ಕಾರಣ
ನಮ್ಮ ಚೇತನ ನಿನ್ನಲೇ ಧಾರಣ

ಹುಟ್ಟುತಿದೆ ಹೊಸ ದೇಶ ಒಂದು

ಶ್ರೀ ಅರವಿಂದರು ಭಾರತದ ಸ್ವಾತಂತ್ರದ ಸಮಯದಲ್ಲಿ ವ್ಯಕ್ತ ಪಡಿಸಿದ ಅನಿಸಿಕೆಗಳನ್ನು ಓದುತ್ತ ಇರುವಾಗ, ಭಾರತ ತನ್ನ ಸ್ವಾತಂತ್ರ್ಯಕ್ಕೆ ಮತ್ತೆ ಹೋರಾಡುವುದಕ್ಕೆ ಸಜ್ಜಾಗುತ್ತಿರುವ ಈ ಸಮಯದಲ್ಲಿ  ಆ ಅನಿಸಿಕೆಗಳು ಇಂದೂ ಕೂಡ ಅಷ್ಟೇ ಸಮಂಜಸವಾಗಿ ಕಂಡವು.




ಹುಟ್ಟುತಿದೆ ಹೊಸ ದೇಶ ಒಂದು

ಜಗತ್ ಮಣ್ಣ ಕಣ್ಣ ಮುಂದು

ನುರಿತ ಕಣ್ಣಿಗೆ ಕಂಡಿತಿಂದು

ಭ್ರಷ್ಟ ಭೂತದ ಬೂದಿ ತಿಂದು



ಹೊಸದಲ್ಲ ಇದು ಈ ದೇಶಕೆ ಇಂದು

ಇದ ಮಾಡಿದೇವು ನಾವು ಎಂದೂ ಎಂದೂ

ಇದು ಬಗ್ಗಿದಿಲ್ಲ , ಇದು ಬಾಗುದಿಲ್ಲ

ನುಗ್ಗಿ ನಡೆ ನೀ, ಸಾಗುದೆಲ್ಲ



ಹಲವು ಪಾತ್ರ ಇದು ಒಂದೇ ಸೂತ್ರ

ಧರ್ಮಕ್ಕೆ ಭಾರತವೇ ಅಕ್ಷಯ ಪಾತ್ರ

ನಿನ್ನ ಹಿಂದೆ ತಿಳಿದು, ನೀ ಮುಂದೆ ನಡೆದು

ಭವ್ಯ ಭಾರತದ ಕನಸ ಹಿಡಿದು, ಹಡೆದು



ಇದು ಬುದ್ಧ-ಯುದ್ಧದ ಶುದ್ಧ ಭೂಮಿ

ಇದ ತಿಳಿಯುವವರು ಇಲ್ಲಿ ಹುಟ್ಟಿದರು ಸ್ವಾಮಿ

'ದಾನ-ಮಾನ' ಜ್ಞಾನದ ಧ್ಯಾನ ಮಂದಿರ

ಎದ್ದು ನಿಲ್ಲುವುದು ಎತ್ತರೆತ್ತರ



ಜಗಕೆ ಎಂದು ಎಂದಿಗೂ ಸೂಚಿ ಸೂಜಿ ನೀ

ನಿಲ್ಲದಿರಲಿ ಇದು ಎಂದು ಅಂದೇ ನೀ

ನನ್ನದಲ್ಲ ಇದು ಯುಧ್ಹ ನಿನ್ನದು

ಬರುವ ಪೀಳಿಗೆಗೆ ದೇಶ ಶುದ್ಧ ಮಾಡಲೆಂದು



* ಜಗತ್ ಮಣ್ಣು: ಭಾರತ, ಮಾತೃ ಭೂಮಿ. ಭಾರತ ಅಲ್ಲದ ಭೂ ಭಾಗ ಮಣ್ಣು ಮಾತ್ರ.

(ಭಾರತೀಯ ಸಂಸ್ಕೃತಿ ಹಾಗು ಅದರ ಮೇಲೆ ಆದ ದಾಳಿಗಳನ್ನು ತಿಳಿದವರಿಗೆ.ಹಾಗು ಭಾರತ ಅದೆಲ್ಲವನ್ನು ತಾಳಿ ಎದ್ದು ನಿಂತ ರೀತಿ ಅರಿತವರಿಗೆ,

ಭಾರತ ಅಲ್ಲದ ಭೂ ಭಾಗ ಬರೀ ಮಣ್ಣು ಅಂತ ಅನಿಸುತ್ತದೆ)

ಬಗ್ಗಿದಿಲ್ಲ , ಬಾಗುದಿಲ್ಲ: ಹಿಂದೆ ಕೂಡ ಬಗ್ಗಲಿಲ್ಲ, ಮುಂದೆ ಕೂಡ ಬಾಗೋದಿಲ್ಲ

ಹಿಂದೆ ತಿಳಿದು,  ಮುಂದೆ ನಡೆದು: ಭಾರತದ ಇತಿಹಾಸವನ್ನು ತಿಳಿದರೆ ಮಾತ್ರ, ಭಾರತದ ಭವಿಷ್ಯ ರೂಪಿಸಲು ಸಾಧ್ಯ

ಬುದ್ಧ-ಯುದ್ಧದ ಶುದ್ಧ ಭೂಮಿ: ಈ ಭೂಮಿಯ ಶುದ್ಧಿಕರಣಕ್ಕೆ ಯುದ್ಧ ಹಾಗು ಬುದ್ಧ (ಬುದ್ಧನ ತತ್ತ್ವ) ಎರಡನ್ನೂ  ಸಮಾನ ಗೌರವದಿಂದ ಬಳಸಿಕೊಂಡಿದ್ದಾರೆ

'ದಾನ-ಮಾನ' ಜ್ಞಾನ: ದಾನ ಮಾಡಿದವನೇ ಮಾನವಂತ ಎಂಬ ಜ್ಞಾನ (ಭ್ರಷ್ಟನು ಮಾನ ಹೀನ ಎಂಬ ಜ್ಞಾನ)
* ಸೂಚಿ ಸೂಜಿ: ಜಗಕ್ಕೆ ದಿಕ್ಕು ತೋರುವ ದಿಕ್ಸೂಚಿಯ ಸೂಜಿ