Thursday, June 17, 2010

ದಿಗಂತ



ಮುನ್ನುಡಿ: ಒಳಮನಸ್ಸಿಗೆ .....ಸೃಷ್ಟಿಕರ್ತನ ಕೂಗು ಕೇಳಿಸಿದಾಗ........ಅದನ್ನು ಅರಸಿ ಹೋಗಬೇಕೋ .....ಇಲ್ಲವೋ.....ಅಂತ ತಿಳಿಯದಿದ್ದಾಗ........
ನನ್ನನು ನಾನು....ಅವನ ಹತ್ತಿರ ಹೋಗುವಷ್ಟು ಶುಭ್ರವಾಗಿ ಇಟ್ಟುಕೊಂಡಿದ್ದೇನ.....?..ಎಂಬುವ ಭಾವನೆ ಮನಸ್ಸಿನಲ್ಲಿ ಮೂಡಿದಾಗ........
ಹರಿದ ಸಾಲುಗಳಿವು......





ದೂರ ದಿಗಂತದೊಳು ಯಾರೋ ಎನ್ನ ಕೂಗುತಿಹರಾ........ತಿಳಿಯದು
ಒಳಗಡಲ ವೀಣೆಯನ್ನು ಮೀಟಿ ಅಲೆಗಳೆಬ್ಬಿಸುತಿಹರಾ.....ಕೇಳದು
ಕಳಚು ಈ ದೇಹಜಾಲವ, ಈಜು ನನ್ನೆಡೆಗೆ ಎಂಬುತಿಹರು ಯಾರದು......

ಈ ಮಲಿನ ಹೆಗ್ಗಡಲಾಚೆ ಈಜಲು ಸಾಧ್ಯವೇ ನನಗೆ.........ತಿಳಿಯದು
ಇದರ ದಾಟಿದ ಮೇಲೆಯೂ ನಾನು ಇರುವೆನೆ ಶುಭ್ರವು.......ಕಾಣದು
ನಿನ್ನೆಡೆ ಈಜಲು ಎನ್ನನು ಈಗ ದೂಡುತಿಹರು....ಯಾರದು......

ನಿನ್ನೋಳಗಿಂದ ಬಂದಿಹ ನನಗೆ
ನಿನ್ನನು ಸೇರಲು ಏಕೀ ಕಾತರ.......
ಎಲ್ಲರೂ ನೀನು ನಮ್ಮೋಳಗೆ ಎಂಬರು
ನಿನ್ನನು ಹುಡುಕಲೆಕೀ ಹಂಬಲ......

No comments: