Thursday, June 17, 2010

ಬಾ ಇನಿಯ........ಬಳ್ಳಿ ಬಾಡಿ ಹೋಗುವ ಮುನ್ನ



ಮುನ್ನುಡಿ: ಆತ್ಮವು...ತನ್ನನ್ನು ಸೃಷ್ಟಿಸಿದ ಆ ಪರಮಾತ್ಮನಿಗೆ ಕಾಯುತ್ತಿದೆ.......
ಅಂಧಕಾರವೇ...ತುಂಬಿದ ಈ ಬಾಳಲಿ....ಆ ಬೆಳಕಿಗೆ ಕಾಯುತ್ತಿದೆ.......
ಸಹಸ್ರಾರು ವರ್ಷಗಳಿಂದ....ಒಂದಲ್ಲ ಇನ್ನೊಂದು ನಶ್ವರ ದೇಹದಲಿ ಬಂಧಿಯಾಗಿದೆ.......
ಈ ಸುತ್ತಾಟ ಸಾಕು....ಬಾ....ಎಂದು ಆತ್ಮವು ಕೂಗಿದಾಗ........
ಅದು ಕವಿಗೆ ಹೀಗೆ ಕಂಡಿತು......






ಕಾಲದಿಂದಲೂ ಕಾದಿಹವು ಕಂಗಳಿವು ನಿನಗೆ
ಎಂದು ಮೂಡುವುದೋ ಆ ಬೆಳಕು ಎಂದು ಕಾಯುತ
ಕುಳಿತಿಹೆ ನಿಷೆಯೋಳು ಹೊಸ್ತಿಲಲಿ, ಆ ಗಾಡಾನ್ಧಕಾರದ ಪಥವನ್ನು ದಿಟ್ಟಿಸುತ
ಎಂದು ಬರುವುದೋ ಆ ಬೆಳಕು ನನ್ನ ಗುಡಿಸಲಿಗೆ ಎಂದು ನಿಟ್ಟುಸಿರಿಡುತ

ಸಹಸ್ರ ಗ್ರೀಷ್ಮಗಳು ಸುಟ್ಟರೂ ಬಾಡದಿಹ ಬಳ್ಳಿಯಿದು
ಹೂವನೋತ್ತು ನಲಿಯುತಿಹುದು ಬರುವುದು ಆ ದುಂಬಿ ಎಂದು ಕಾಯುತ
ಸಹಸ್ರ ಆಶಾಢಗಳಿಗೂ ನಂದಲಾರದ ದೀಪವದು
ಉರಿಯುತಿಹುದು ಸಿಗುವುದು ತನಗೆ ಆ ಬೆಳಕು ಎಂದು..... ಎಂದು ಕಾಯುತ

ಸಂಸಾರ ಸಾಗರದೊಳು ಮಿಂದು ಬೆಂದಿಹೆ ನಾನು, ಮುಪ್ಪಾಗಿಹುದು ಈ ಮೇಲ್ಪದರ
ಹುಟ್ಟು ಸಾವಿನ ಚಕ್ರದೊಳು ಸುತ್ತಿ ಬಾಯಾರುತಿಹೆ ನಾನು

ಬಾ ಇನಿಯ........ಬಳ್ಳಿ ಬಾಡಿ ಹೋಗುವ ಮುನ್ನ
ಹೂವು ಉದುರುವ ಮುನ್ನ, ದೀಪವು ನಂದುವ ಮುನ್ನ

No comments: