Thursday, June 17, 2010

ನಿನ್ನನು ಸೇರಲು ಬರುತಿಹೆ ನಾನು........



ಮುನ್ನುಡಿ: ಆತ್ಮವು...ಪರಿಪಕ್ವ ಆದಾಗ.....ಆ ಮಹಾ ಶಕ್ತಿಯು....ಅದರಲ್ಲಿ ಅವತರಿಸುವುದೆಂದು ಹೇಳುತ್ತಾರೆ......
ಹಾಗೆ ಅವತರಿಸುವ ಕೊಂಚ ಮುನ್ನ....ಅವತರಿಸುವ ವೇಳೆ...ಹಾಗು ಅವತರಿಸಿದ ನಂತರ.....
ಆ ಕ್ಷಣಾರ್ಧದಲ್ಲಿ ..........ಮನಸ್ಸಿನಲ್ಲಿ ಹಾಗು ದೇಹದಲ್ಲಿ ಆಗುವ ಅನುಭವಗಳ ಒಂದು ನೆರಳು ಇದು.....




ಗರಿಗೆದರಿ ಕುಣಿಯುತಿಹಳು ಮನಮಯೂರಿ
ಜ್ಞಾನಗಂಗೆಯು ವೃಷ್ಟಿ ರೂಪದೊಳು ಅವತರಿಪಳೆಂದು ತಿಳಿದು
ಭೋರ್ಗರೆದು ಉಕ್ಕುತಿಹುದು ಒಳಗಡಲು
ತಾಳುವೆನೆ...... ಆ ಅವತರಿಪ ಶಕ್ತಿಯನ್ನು ಎಂದು ತಿಳಿಯದು

ಶುಭ್ರವಾದ ಶಕ್ತಿಯದು ಧುಮುಕುತಿಹುದು ನನ್ನೆಡೆಗೆ
ತೊಳಿಯುತಿಹುದು ಒಳಗುಡಿಯನ್ನು, ಕರಗಿಸುತಿಹುದು ಮಲಿನ ಮೂರ್ತಿಯನು
ಕಳಚಿದೆ ಸೆರೆಯು,ಮೂಡಿದೆ ಬೆಳಕು
ಸಾಕು ಇಂದು ನಿನಗೆ ಈ ದೇಹದ ಹಂಗು...ನಡೆ ನನ್ನೆಡೆಗೆ ಎನ್ನುತಿಹುದು

ಹರಿಯುತಿಹೆನು ನಾನು ಈ ಜ್ಞಾನಗಂಗೆಯೊಳು
ಕರೆದೊಯ್ಯುತಿಹುದು ಎಲ್ಲಿಗೆ ಇದು ಎನ್ನನು
ಮೂಡಲಾಚೆಗೆ ಹೊರಟಿಹೆ ನಾನು
ನಿನ್ನನು ಸೇರಲು ಬರುತಿಹೆ ನಾನು

No comments: