Tuesday, June 15, 2010

ಕವಿಯ ನಲ್ಲೆ......


ಮುನ್ನುಡಿ: ಅಂದೊಂದು ದಿನ......ನನ್ನ ಮನಸಲ್ಲಿ ಬಹುತೇಕ ಮೂಡಿದ ಭಾವನೆ ಒಂದನ್ನು....ಕಾತರದಿಂದ ಬರೆಯಲು ಕುಳಿತಾಗ....ಏಕೋ...ಭಾವನೆಗಳು ಹರಿಯಲಿಲ್ಲ.....ಶಬ್ಧಗಳು ಮೂಡಲಿಲ್ಲ....

ಆ ಕ್ಷಣದಲ್ಲಿ.....ನಾನು ಕರೆದಾಗ ಕವನವು ಬರಲಿಲ್ಲವೆಂಬ ಭಾವನೆಯೇ....ವಿರಹವು ಅಂತ ಅನಿಸಿದಾಗ...ಮೂಡಿಬಂದ ಸಾಲುಗಳಿವು..........



ಇಷ್ಟು ಸನಿಹಕೆ ಬಂದು

ಮರೆಯಾದೆ ಏಕೆ ನಲ್ಲೆ

ಮನವನು ಕದಡಿ.......

ಮನಸನು ಮುದುಡಿ.......

ಹೊರಟೆ ಎಲ್ಲಿಗೆ

ಎಲೆ ನಲ್ಲೆ.......



ಪ್ರೇಮ ಪಾಶವ

ಬಿಗಿದು ಕೊರಳಿಗೆ

ಸರೆದರೆ ನೀನು

ಉಳಿಯೆನೆ ನಾನು.....?

ಕೂಗಿ ಕರೆಯಲಾರೆ

ನಿನ್ನನು ನಾನು

ಮನವು ತುಂಬಿಹುದು

ಕೊರಳು ತಂಗಿಹುದು

ಅರಿಯೆಯ ನೀನು.....



ನಗುತಿರುವ

ಎಲೆ ಚಂದ್ರನೇ ನೀನು

ನನ್ನ ರೂಪಸಿಯ

ನೀನೆ ಕರೆದೊಯ್ದೆಯೇನು

ಬಯಲಾಚೆಗೆ ಓಡುತಿರುವೆ

ಏಕೆ ವಾಯುವೆ ನೀನು

ಸ್ವರ್ಗದೊಳಿಹ ಅಪ್ಸರೆಯರು

ನಿನಗೆ ಸಾಲದೇನು



ಕೈಲಾಸದೊಳಿಂ ಕಣ್ಣ ಹಾಯಿಸು

ಶಿವನೆ ನೀನು

ದಕ್ಷ ಪುತ್ರಿಯು ಹೊರಟಾಗ

ಆದ ವಿರಹವನೂ ಮರೆತೆಯೇನು.....



ಸಾಧನೆಯ ಅಂಚಿನೊಳಿಹ

ಸಾಧಕನು ನಾನು

ಮುಕ್ಕಂಣನು ಮುನಿದರೂ

ನಿಲ್ಲುವೆನೆ ನಾನು.......?



ಕವಿಯ ನಲ್ಲೆ

ಎಲೆ ಕವನವೆ ನೀನು

ನನ್ನ ತೊರೆದರೂ ನೀನು.......

ನಿನ್ನನು ಬಿಡುವೆನೆ ನಾನು.....?

4 comments:

Unknown said...

Anup.. superb, I cant believe this....
great going.. keep it up boss.......
very much impressed...

Unknown said...

great going.... Anup

ರೂಡಿಯೊಳಗಿನ ರೂಢಿಗಳು ... said...

good one Anup... i feel the anxiety of the poet...

Gonchalu.......... said...

Thank you Guys......