Tuesday, June 15, 2010

ರುದ್ರನು ತಾಂಡವವಾಡುವುದೆಂದು......?


ಮುನ್ನುಡಿ: ಈ ಕವನದಲ್ಲಿ......ಇಂದಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿರುವಂತಹ ಒಂದು ಕರಾಳತೆಯ ಚಿತ್ರೀಕರಣವಿದೆ .........

ಕಾಡು ಎಂಬುದು....ಇಲ್ಲಿ ಸಮಾಜವನ್ನು ಪ್ರತಿಬಿಂಬಿಸುತ್ತದೆ.......

ಗುಡಿ ಎಂಬುದು......ನಮ್ಮ ದೇಹ.....

ಅದರೊಳಗೆ ಇರುವವನು.....ಆತ್ಮ....

ಕವಿಯ ಪ್ರಕಾರ ಇಂಥ ಒಂದು ಸಮಾಜವು..........ಪ್ರಳಯಕ್ಕೆ ಸಿದ್ಧವಾಗಿದೆ............

ಇಲ್ಲಿ ಪ್ರಳಯ ಎಂದರೆ.........ಅಧರ್ಮವನು ತೊಳೆಯುವ....ಹಾಗು ಹೊಸತಾದ ಹಾಗು ಶುಭ್ರವಾದ ಒಂದು ಸಮಾಜವನ್ನು ರಚಿಸುವುದಕ್ಕೆ ಮುನ್ನುಡಿ.........



ದಟ್ಟ ಕಾಡಿನ ನಡುವೆ, ಕಾರಗತ್ತಲೇ ಒಳಗೆ

ನಿಶಾಚರಿ ಚಂದ್ರನು ಅಂಜಿ ಅಡಗಿಹನು ಮೋಡದ ಕವದಿಯ ಒಳಗೆ

ಮಸಣ ಮೌನವು ತಬ್ಬಿಹುದು ಧರೆಯನು ಈ ಕ್ಷಣದೊಳು

ಮಾಟಗಾತಿಯ ನಗುವು ತುಂಬಿಹುದು ಮರುಕ್ಷಣದೊಳು



ಗುಡಿಯೊಂದಿಹುದು ಕಾಡಿನ ನಟ್ಟ ನಡುವೆ

ಬರಲಾದ ನ್ಯಾಯವೃಕ್ಷವು ನಿಂತಿಹುದು ಅದರ ಬದಿಗೆ

ಬಾವಲಿಗಳ ಹಿಂಡು ಸುತ್ತುತಿಹುದು ಗೊಪುರವನು

ನರ್ತಿಸುತಿಹವು ಕ್ಶುದ್ರಶಕ್ತಿಗಳು, ಮುತ್ತಿಹವು ಅಂಗಳವನು



ಗರ್ಭಗುಡಿಯ ಬಾಗಿಲು ಮುಚ್ಚಿಹುದು,

ಜೇಡರ ಬಲೆಯು ಅದನು ಅಪ್ಪಿಹುದು

ಧೂಳಿನ ಅಭಿಷೆಕವನು ಸ್ವೀಕರಿಸುತಿಹನವನು ಒಳಗೆ

ಕಣ್ಣ ಅಂಚಿನಲಿ ಭರವಸೆಯನಿಟ್ಟು ಕಾಯುತಿಹನು ಯಾರಿಗೆ



ಹುದುಗಿಹೋದ ಧರ್ಮದ ಜ್ವಲಾಮುಖಿಯೊಂದು ಕುದಿಯುತಿಹುದು ಇಂದು

ಸಿಡಿದು, ಸರಿದು, ಬಿರಿದು, ಹರಿದು. ಜರಿಯುವುದು ಎಂದು?

ರುದ್ರವೀಣೆಯು ನುಡಿಯುವುದು ಎಂದು?

ರುದ್ರನು ತಾಂಡವವಾಡುವುದೆಂದು ?

No comments: