Thursday, November 10, 2011

ಗುರು ನಮನ

ಮಣ್ಣಿನಾ ಕಣ್ಣಾಗ ಕಳೆಯನ್ನು ತುಂಬಿದಾ ಗುರುವೇ ನಿನಗ ಶರಣು

ದೇಹದಾ ಕಣಕಕ್ಕ ಹೂರಣಾ ತುಂಬೀದ ಬೆಳಕೇ ನಿನಗೂ ಶರಣು



ಚಿಗುರೀಗ ಒಡೆದೈತಿ, ಮರವಾಗಿ ಬೆಳಿತೈತಿ, ಇರಲು ನಿನ್ನ ಕರುಣಾ

ಭವ ದಾಟಿ, ಜವ ದಾಟಿ, ನಾ ಬರುವ ಈ ಧಾಟಿಗಿಲ್ಲ ಇನ್ನು ಮರಣಾ



ಆಂತರ್ಯಕೆ ಅಮೃತದಂದಾ ತಂದಾ ತಂದೆಗಿಲ್ಲ ಆಡಂಬರಾ

ಅಮೃತಧಾರೆಯ ಹಿಡಿದು, ಅಂತಃಪುರಕೆ ಬಾ ಅಂದೆಯಾ ಔದುಂಬರಾ ?



ನನ್ನೊಳಗಿನೊಳಗೆ ನೀ ಬೆಳಗು ಬೆಳಕೇ, ಓ ಗುರುವೇ ನೀನು ಬಂದು

ನಿನ್ನ ಚರಣದರುಣದಲಿ ಇರುವ ಬೆಳಕು, ಕರುಣೆಯಾಗಿ ನನ್ನ ಮಿಂದು



No comments: