Tuesday, July 26, 2011

ಗರ್ಭಗುಡಿಯ ದೀಪ

ಗರ್ಭಗುಡಿಯ ಓ ದೀಪವೆ ನಿನಗೆ

ಕಿವಿಮಾತೊಂದಾ ಕೇಳುವೆ

ನಿಜವನೆ ನೀನು ಹೇಳಬೇಕು

ಎಂದು ನಾನು ಬೇಡುವೆ



ಶಿವಪ್ಪನ ಗುಡಿಯಲಿ, ಅವನ ಬಗಲಲಿ

ನೀನು ಎಂದೂ ಕೂರುವೆ

ನಮ್ಮ ಬಸಪ್ಪನೇ ಹೊರಗೆ ಕೂತಿರಲು,

ನೀನು ಒಳಗೆ ಹೇಗೆ ಹೋಗುವೆ

ಇಷ್ಟು ಸನಿಹಕೆ ಅವನಿಗೆ ನೀನು ಹೋಗಲು ಏನು ಮಾಡಿದೆ?

ಹೋದ ಜನ್ಮದಲಿ ಯಾವ ಪುಣ್ಯವ ಮಾಡಿ ಹೀಗೆ ಆಗಿದೆ?



ನಾರಾಯಣಪ್ಪನಾ ಗುಡಿಯಲಿ ಹೋದರೆ

ಅಲ್ಲೂ ನೀನೇ ಕಾಣುವೆ

ಕಾಲಲ್ಲಿ ಕೂತಿರಲು ಲಕ್ಷ್ಮವ್ವ

ನೀನು ತೆಲೆಯ ಬದಿಯಲಿ ಕೂರುವೆ

ನೀನು ಹೀಗೆ ಆಗಲು, ಏನು ಏನು ಮಾಡಿದೆ

ನನಗೆ ಅದನು ಹೇಳಲೂ, ನಿನ್ನ ಗಂಟು ಕಳೆದು ಹೂಗುದೆ?



ಅಮ್ಮನ ಗುಡಿಯಲಿ ಅಮ್ಮನ ಮೇಲೇ

ಬೆಳಕನು ನೀನು ಚೆಲ್ಲುವೆ

ಆಕೆಯ ಜರತಾರಿಯ ಜರಿಗಳಿಗೆ

ಮೆರಗನು  ನೀನು ನೀಡುವೆ

ದೀಪವೆ ನೀನು ಬೆಳಕಾಗಲು, ಯಾವ ತಪವನು ಮಾಡಿದೆ?

ಅಮ್ಮನ ಮೇಲೇ ಬೆಳಕು ಚೆಲ್ಲಲು, ಯಾರ ಕರುಣೆ ಕೋರಿದೆ?



ಮಗುವನು ಹೊತ್ತು  ನಿಂತಿರೋ ತಾಯಿಯ

ಮೊಗದಲಿ ಮಿಂಚನು ಮುಡಿಸುವೆ

ಆ ಗರ್ಭ-ಗುಡಿಯಲೂ ನೀನೇ ಇರುವುದು

ಎಂದು ನಾನು ಹೇಳುವೆ

ಒಳಗೆ ಹೊತ್ತಿರುವ ದೀಪದ ಬೆಳಕು ಆಕೆ ಕಣ್ಣಲಿ ಕಾಣಲು

ಗರ್ಭಗುಡಿಯೋಳು ಕೂತಿರೋ ದೇವಗೆ ಅಲ್ಲವೇ ಆಕೆ ಸಮಾನಳು?



ನಿನ್ನ ಎಷ್ಟು ನೋಡಿದರೂ, ಎಷ್ಟು ನಿನ್ನ ಕೇಳಿದರೂ

ನೀನು ಯಾರು ಎಂಬುದೇ ತಿಳಿಯದು

ನೀ ಗುಡಿಯ ಗರ್ಭದಲಿ ಕೂರುವವನಾ?

ಗರ್ಭದ ಗುಡಿಯಲಿ ನೆಲೆಸುವವನಾ, ಎಂದು ಅರಿಯದು

ಇನ್ನೂ ನನಗೆ ಅರಿಯದು, ಎಂದು ನನಗೆ ಅರಿವುದು?

Monday, July 25, 2011

ಯೆಷ್ಟಾರ ಉಣಿಸುತಿಯೇ ತಾಯಿ ನೀನು

ಯೆಷ್ಟಾರ ಉಣಿಸುತಿಯೇ ತಾಯಿ ನೀನು

ನಿನ್ನ ತತ್ತ್ವ ತುತ್ತುಗಳ ಮರ್ಮವೇನು

ನೀ ಇಲ್ಲದಿರಲು ನಾ ಬೆಳೆದೆನೇನು?

ಬೆಳೆದರೂ ಹಾಗೆ ಅದರರ್ಥಯೇನು?



ಒಡಲಲ್ಲಿ ಬಚ್ಚಿ ನನ್ನ ಕಾದು ಕಾದು

ಕೆನ್ನೀರ ಸತ್ತ್ವವನು ಹೀರಿ ಬೆಳೆದು

ನನ್ನ ತೀಡಿ ತೊಳೆದು ಅಲ್ಲಿ ರೂಪ ನೀಡಿ

ಈ ಚೇತನಕ್ಕೆ ಒಂದು ಮನೆಯ ಮಾಡಿ

ಯೆಷ್ಟಾರ ಉಣಿಸುತಿಯೇ ತಾಯಿ ನೀನು

ನಿನ್ನ ತತ್ತ್ವ ತುತ್ತುಗಳ ಮರ್ಮವೇನು



ಉಣಿಸುವೆ ಹಾಲು, ದೇಹಕೆ ನೀನು

ಮನಕೆ ಉಣಿಸುವೆ ಪ್ರೇಮದ ಜೇನು

ಧೈರ್ಯವ ಉಣಿಸಿ ಜೋಗುಳದಲ್ಲಿ

ಆದರ್ಶವ ಉಣಿಸಿ ತುತ್ತುಗಳಲ್ಲಿ

ಯೆಷ್ಟಾರ ಉಣಿಸುತಿಯೇ ತಾಯಿ ನೀನು

ನಿನ್ನ ತತ್ತ್ವ ತುತ್ತುಗಳ ಮರ್ಮವೇನು



ಮನವನು ಮಣಿಸುವ ದಾರಿಯ ಹೆಣೆಸಿ

ಅದರಲ್ಲಿ ನಡೆಯಬೇಕೆಂದು ಕಲಿಸಿ

ನಾ ಸೋತರೆ ಏನು, ಈ ಜಗದಲಿ ಇಂದು

ನಿನ್ನ ತೊಡೆಯೇ ನನಗೆ ಇದು ಊರ್ಜೆ ಬಿಂದು

ಯೆಷ್ಟಾರ ಉಣಿಸುತಿಯೇ ತಾಯಿ ನೀನು

ನಿನ್ನ ತತ್ತ್ವ ತುತ್ತುಗಳ ಮರ್ಮವೇನು



ನಾ ನಿನ್ನ ತೊರೆದು, ನೀ ನನ್ನ ತೊರೆದು

ಹೋದೆವೆಂದರೂ ಹೋದೆವೆಂದು?

ಜಗದಾಟವಾಡಿ ನಾ ಮಲಿನವಾಗಿ

ಭೂ ನಲ್ಲಿ ಮಲಗಿ ನಾ ವಿಲೀನವಾಗಿ

ನಾ ಮತ್ತೆ ಮತ್ತೆ ಮತ್ತೆ ಶುಭ್ರವಾಗಲು

ಬಂದು ಸೇರುವೆ ನಿನ್ನ ಒಡಲೋಳು

Wednesday, July 6, 2011

ದಿವ್ಯ ನಿದ್ರೆ.....



Awakening is the process of getting into a state of Divine Sleep/Trans. In that Divine Sleep, you will be able to see a dream and what you see and experience in that dream is what awakens you.



ಓ ದಿವ್ಯ ಮಗುವೆ

ನೀ ಮಾಡುತಿರುವೆ

ಅದುವೇ ದಿವ್ಯ ನಿದ್ರೆ

ದಿವ್ಯ ನಿದ್ರೆಯಾ

ದಿವ್ಯ ಕನಸಿನಲಿ

ನವ್ಯ ಬಾಳ ಮುದ್ರೆ



ಉಸಿರಾಡು ಆಡು ನಿನ್ನ ಉಸಿರಿನಲ್ಲಿ

ಓಂಕಾರ ಗುನುಗುತಿಹುದು

ಈ ದಿವ್ಯ ನಿದ್ರೆ ನಿನಗೆ ಎಂದೆಂದೂ ಇರಲಿ

ಇದುವೇ ದಿವ್ಯ ಮದಿರೆ



ನೀ ಸುಪ್ತನಲ್ಲ, ನೀ ಮುಕ್ತನಿಂದು

ಬೆಳಕಿನಾ ತೊಟ್ಟಿಲಲ್ಲಿ

ಅದು ತೂಗಿದೆಷ್ಟು, ನೀ ಮಲಗಿದಷ್ಟು

ನೀ ಎಚ್ಚರ-ಎಚ್ಚರ ಅಲ್ಲಿ



ಇದು ನಿನ್ನ ಬಾಳು, ಇದು ನಿನ್ನ ಯೋಗ

ಇದು ಯೋಗ ಮಾತ್ರ ವಿರಲಿ

ನಿನ್ನ ಚಿತ್ತ-ಚೇತನದ ಸುತ್ತು ಸುತ್ತಲೂ

ಭೋಗ ಸುಳಿಯದಿರಲಿ



ಆ ಬಾಳು ನೀನು ಬಾಳಿದರೆ-

ಆಗ, ಆ ಬಾಳು ಪೂರ್ಣ ಯೋಗ

ಆ ಪೂರ್ಣ ಯೋಗದ ಪೂರ್ಣಾಹುತಿಯು

ಆಗ ಅವಗೆ ಯೋಗ್ಯ.....

Friday, July 1, 2011

ಬಾರೋ ಬಾರೋ ಶಿಶಿರ ವಸಂತ


ಬಾರೋ ಬಾರೋ ಶಿಶಿರ ವಸಂತ

ಬಾಳಿಗೆ ಬಣ್ಣವ ಬಳಿಯುವ ಸಂತ

ಬಣ್ಣದ ಆಟದ ಪರಿ ಇದು ಎಂಥ

ಬಾರೋ ಬಾರೋ ಶಿಶಿರ ವಸಂತ


ಹೂವುಗಳ ಹಾಗೇ ಅರಳಿರು ಅಂತ

ಅರಳಿಸಿ ಮಧುವನು ಹಂಚುತ ನಿಂತ

ಮಧುವನು ಹಂಚಿ ನಗುತಿರು ಅಂತ

ಜೀವನ ಪಾಠವ ಕಲಿಸುವ ಸಂತ

ಇಂತಹ ಕಲೆಯು ನಿನಗೇ ಸ್ವಂತ

ಬಾರೋ ಬಾರೋ ಶಿಶಿರ ವಸಂತ


ಅಲ್ಲಿ ಅವನ ಬಿಳಿ ಮಾಡಿ, ಮತ್ತವನ ಕರಿ ಮಾಡಿ

ಹಳದಿ ಮತ್ತಿವನ ಮಾಡಿದ ನಿನ್ನ ಕಲೆ ಎಂಥ

ಎಲ್ಲರಲ್ಲೂ ತುಂಬಿದೆ ಕೆಂಪು ಅಂತ

ಅಂದ ನಿನ್ನೆಯ ಅಂದ ಎಷ್ತಂಥ

ತಿಳಿವವರು ಯಾರಿಲ್ಲಿ ಇಲ್ಲಂತ

ಬಾರೋ ಬಾರೋ ಶಿಶಿರ ವಸಂತ


ತಿಂಗಳನಿಗೆ ಒಂದು ಬಣ್ಣ, ಮಂಗಳನಿಗೆ ಒಂದು ಬಣ್ಣ

ಭುವಿಗೆ ಮತ್ತೊಂದು ಬಣ್ಣ ಕೊಟ್ಟ ಸಂತ

ಎಲ್ಲ ಬಣ್ಣವ ಸೂರ್ಯನಲ್ಲಿ ಇತ್ತು ನಿಂತ

ಬಾ ಬಾರೋ ಕಲೆಗಾರ ಮತ್ತ ಮತ್ತ

ಶಿಶಿರಾದ ಬಾಳಿಗೆ......ಬಾ ವಸಂತ........

Thursday, June 16, 2011

ಬಾ ತಾಯಿ ಭಾರತಿಯೇ ಬಿಗಿದಪ್ಪಿಕೋ......

ಮುನ್ನುಡಿ: ಕಳೆದ ೩೦ ವರ್ಷಗಳಲ್ಲಿ ನಮ್ಮ ದೇಶಕ್ಕೆ ಹಾಗು ಅದರ ಸ್ವಾತಂತ್ರ್ಯಕ್ಕೆ ಕುತ್ತು ಬರುವಂತ ಯಾವುದೇ ಘಟನೆ ನಡೆದಿಲ್ಲ. ಅಂದರೆ ನಮ್ಮ ತಾಯಿಯು ನಮ್ಮನು ಅಷ್ಟು ಸುಭದ್ರವಾಗಿ ಕಾಪಾಡುತ್ತಿದ್ದಾಳೆ.....ಅದರ ಫಲವಾಗಿ ಇಂದಿನ ಪೀಳಿಗೆಗೆ ದೇಶ ಎಂಬುದರ ಚಿತ್ರಣ ಅಷ್ಟು ಸ್ಪಷ್ಟವಾಗಿ ಕಾಣುತ್ತಿಲ್ಲ.ಎಲ್ಲೋ ನಾವೆಲ್ಲಾ "ದೇಶ" ಎಂಬ ಭಾವನೆ ಇಂದ ದೂರ ಹೊಗಿತ್ತಿದ್ದೇವೆ ಅಂತ ಅನಿಸುತ್ತಿದೆ.

ಹಾಗಾಗಿ ತಾಯಿಯೇ ನಮಗೆ ಒಂದಷ್ಟು ಕಷ್ಟವನ್ನು ಕೊಟ್ಟು ದೇಶದ ಕಡೆಗೆ ಸೆಳೆತ ಮೂಡಿಸುವಂತೆ ಕೇಳಿಕೊಳ್ಳಬೇಕು ಅಂತ ಅನಿಸುತ್ತಿದೆ.....



ಬಾ ತಾಯಿ ಭಾರತಿಯೇ ಬಿಗಿದಪ್ಪಿಕೋ

ನಿನ್ನ ಮಕ್ಕಳನು ನೀ ಬಿಗಿದಪ್ಪಿಕೋ

ಹುಂಬರು ಇವರೆಂದು ನೀ ಒಪ್ಪಿಕೊ

ಬಾ ತಾಯಿ ಭಾರತಿಯೇ ಬಿಗಿದಪ್ಪಿಕೋ.....



ಚಂಡಿಯಾಗಿ ಛಡಿಯನು ಹಿಡಿದು

ದೂರ ಓಡುತಿರುವವರನು ತಡೆದು

ಮಕ್ಕಳನು ದಂಡಿಸಲು ನೀ ಒಪ್ಪಿಕೊ

ಬಾ ತಾಯಿ ಭಾರತಿಯೇ ಬಿಗಿದಪ್ಪಿಕೋ



ಶತಮಾನಗಳಿಂದ ಇಲ್ಲೇ ಹುಟ್ಟಿದವರು ನಾವು

ಹುಟ್ತಲಿಕ್ಕಿನ ಮುಂಚೆ ದೇಶವನು ಕಟ್ಟಿದವರು ನಾವು

ಹೀಗೇಕೆ ಹೀಗಾದಿವೆನ್ದರಿತುಕೋ

ಮಕ್ಕಳನು ದಂಡಿಸಲು ನೀ ಒಪ್ಪಿಕೊ



ತಾಯಿ ಇಹಳು ಎಂದು, ನೀ ಹೇಳದಿದ್ದರೆ

ಇಲ್ಲೆಂದು ಅವರು ತಿಳಿದು...

ನಾ ನೀನು ಹೋಗಿ ಅವರೊಬ್ಬರಾಗಿ

ಇಲ್ಲೇ ಅಳಿದು....ಕಳಿದು....



ಗಾಬರಿಯು ಗೋಳ್ಳುವರು ಅವರು ಅಂದು

ಕಾಯುವವರು ಇಲ್ಲ ಎಂದು

ತಾಯಿಯು ಇಲ್ಲೇ ಇರುವಾಗಲೇ,

ನಾವು ಏಳಬೇಕು ಇಂದು...

ಆಕೆಯ ಸುತ್ತಲು ಎಲ್ಲ ಸೇರಿ

ಸ್ವರ್ಗ ಕಟ್ಟಲೆಂದು.....

ನಿಶೆಯ ಗರ್ಭ


ಯಾವ ಮಂಜಿದು ಮುತ್ತಿದೆ ನಮ್ಮನು

ಎಲ್ಲವೂ ತಣ್ಣಗಾಗಿದೆ

ಅಂದು ಚಿಗುರಿದ ಹಸಿರು ಗಿಡಗಳು

ಬರಲು ಬರಲು ಆಗಿವೆ.......



ಮಂಜಿನ ಗಡ್ದೆಗಳಡಿಯಲಿ ಎಷ್ಟೋ

ನೆನಪುಗಳು ಹೂದುಗೀ ಹೋಗಿವೆ

ಶಾಖವೆ ತಾಗದೆ, ಚಿಗುರದೆ, ಬೆಳೆಯದೆ

ಶವಗಳಾಗೀ ಹೋಗಿವೆ......



ತಣ್ಣನೆ ನಿಶೆಯ ಗರ್ಭದಿ ಒಂದು

ಬೆಂಕಿ ಉಂಡೆಯು ಬೆಳೆಯುತಿದೆ....

ಪ್ರಸವ ಸಮಯದಿ ಹೊರಗೆ ಬರುವನು

ನೇಸರನು ಎಂದು ಕಾಯುತಿದೆ.....



ಕಾಯಲೇ ಬೇಕು ಪ್ರಸವ ಸಮಯಕೆ

ಎಂದು ನೀನು ಅರಿತಿರು...

ಬೆಳಕು ಬರುವ ಸಮಯದಲ್ಲಿ

ನೀನು ಎದ್ದು ಕುಳಿತಿರು....



ನಿಶಾ ಮಾತೆಯ ಗರ್ಭದಿಂದ

ನೇಸರನು ಬಂದೇ ಬರುವನು.....

ಮಂಜು ಕರಗಿಸಿ, ಮೊಳಕೆ ಮೂಡಿಸಿ

ಬಾಳಿಗೆ ಬಣ್ಣವ ತರುವನು....

Friday, June 10, 2011

ತಬ್ಬಲಿ ತಾಯಿ….


ನಿಂತಿಹಳು ನೋಡಲ್ಲಿ ಒಬ್ಬ ತಾಯಿ

ಯಾಕಾದಳಾಕೆ, ತಬ್ಬಲಿ ತಾಯಿ….


ತಾ ಹಡೆದ ಎಲೆಗಳು

ತನ್ನನಗಲಿ

ಹಾರಿ ದೂರ ದೂರ......

ಬರ-ಬರಲು

ಆಕೆ ಒಡಲಾಗುತಿರಲು

ಬರಬಾರದೇನೋ ಪೋರ....


ಎಲೆ ಇರದೇ ಆಕೆ

ನಿಂತಿಹಳು ಯಾಕೆ

ಎಂದು, ನಿನ್ನ ನೀನು ಕೇಳು.....

ನಿನ್ನ ಹಡೆದ ಪಾಪ

ಆಕೆಯದ ಪಾಪ

ಎಂದು, ನೀನು ಹೇಳು.....


ತಾಯಿ ಬೇರು ನೋಡಿ

ಎಲ್ಲೆಲ್ಲಿ ಹರಡಿ

ಸಾರ ಸತ್ತ್ವ ಹೀರಿ.....

ಅದ ಉಂಡ ನೀನು

ಹಿಂಗಾದೆಯೇನು

ತಾಯಿಗೇನೆ ಆದೆ ಮಾರಿ....


ಎಷ್ಟು ಎತ್ತರೆತ್ತರಕೆ

ನೀನು ಬೆಳೆದರೂ

ಆಗಲಿಲ್ಲ ಸೂರ....

ನೀ ನೆನೆಯದಿರಲು

ಒಳಗೆ ಹೂತು ಹೋದ

ತಾಯಿ ಬೇರ ಸಾರ....