
ಮುನ್ನುಡಿ: ಜೀವನದುದ್ದಕ್ಕೂ....ದೇವರನು ಹುಡುಕಿ ಹೊರಟಾಗ....ಯಾವ ದಾರಿಯಲಿ ಅವನು ಸಿಗುವನು ಎಂದು ತಿಳಿಯದಿದ್ದಾಗ........
ಆತ್ಮಕ್ಕೆ ದೇಹವೇ ಒಂದು ಕರಾಗೃಹವು ಅಂತ ಎನಿಸಿದಾಗ.......ಅವನನ್ನು ಸೇರಲು....ಈ ದೇಹವನು ಬಿಟ್ಟು ಅದು ಹೋಗಬೇಕು ಎಂದನಿಸಿದಾಗ....
ಚಿಮ್ಮುತಿಹುದು ಚಿಲುಮೆಯೊಂದು ಒಳಮನಸ್ಸಿನಲಿ ಇಂದು
ಹೊರಟಿಹಳು ತನ್ನ ನಲ್ಲನರಸಿ ಹುಡುಕುತ ಬಳಕುತ ಇಂದು
ಶತಪಥ ಸಹಸ್ರ ಕವಲುಗಳ ದಾರಿಯೊಳು
ತನ್ನ ಇನಿಯನ ಆಲಿಸುತ ಹೊರಟಿಹಳು ಇಂದು
ಹಪಿಸುತಿಹುದು ಹಕ್ಕಿಯೊಂದು ಗೂಡುಬಿಟ್ಟು ಹಾರಲೆಂದು
ಕಡಲಾಚೆಗೆ, ಮುಗಿಲಾಚೆಗೆ, ನಿತ್ಯ ಪುಟಿಯುವ ರವಿ ಶಶಿಗಳಾಚೆಗೆ
ಸರಿಸು....... ಈ ಮಸಣ ಬೂಧಿಯನು ಇಂದು
ಬಿಡುಗಡೆಗೆ ಕಾದಿಹುದು ಒಳಗೆ ಕೆಂಡ ಒಂದು
ಸಾಕು ಈ ವಿರಹ......ತಾಳಲಾರೆ ಎಂದಳಾಕೆ
ಬಿಗಿದಪ್ಪಿ ಕರೆದೊಯ್ಯಿ ಆಕೆಯನು ನಿನ್ನ ಅಂತಃಪುರಕ್ಕೆ
ಲೀನವಾಗಲಿ ನಿನ್ನೋಳಗಾಕೆ
ಇದೆ ಅಲ್ಲವೇ ಆಕೆಯ ಬಯಕೆ.........
No comments:
Post a Comment